Wednesday, May 13, 2015

ವಾಯುವಿಹಾರದ ಸೈಡ್ ಎಫೆಕ್ಟ್ಸ್!

(2014 ರ  ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ)





ನನಗೆ ಯಾವಾಗಲೂ ಈ ಟೀವಿ ಕಾರ್ಯಕ್ರಮಗಳ ಬಗ್ಗೆ ಬಹಳವೇ ಮುನಿಸು. ಎಲ್ಲವನ್ನೂ ಉತ್ಪ್ರೇಕ್ಷೆ ಮಾಡಿ ಹೇಳುವುದರಲ್ಲಿ ಮಾಧ್ಯಮದವರು ಎತ್ತಿದ ಕೈ. ನಿಜ ಯಾವುದು,ಸುಳ್ಳು ಯಾವುದು ಅಥವಾ ಉತ್ಪ್ರೇಕ್ಷೆ ಯಾವುದು ಎಂದು ಅರಿಯದ ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ನೀವು ಒಮ್ಮೆ ಇಂಗ್ಲಿಷ್ ಮಾಧ್ಯಮಗಳನ್ನ ಗಮನಿಸಿ. ನರೇಂದ್ರ ಮೋದಿ ಗೆ ಇರುವ ಕೆಟ್ಟ ಗುಣಗಳು, ಮಾಧ್ಯಮ ಇರ ಬಯಸುವ / ನಂಬಿರುವ ಆತನ ದುಷ್ಕೃತ್ಯಗಳು ಎಲ್ಲವನ್ನೂ 16 ಆಣೆ ಸತ್ಯ ಅನ್ನೋ ಹಂಗೆ ವರದಿ ಪ್ರಸಾರ ಮಾಡುತ್ತವೆ! ಹೋಗ್ಲಿ ರಾಜಕೀಯ ಯಾಕೆಮಾಡಿರುವ ಉಪ್ಪಿಟ್ಟನ್ನೂ ಕೂಡ "ಜೀವನದಲ್ಲಿ ಇಂತಾ ಒಂದು ಖಾದ್ಯ ತಿಂದೇ ಇಲ್ಲ" ಅನ್ನೋ ಹಂಗೆ ಸಿಹಿ ಕಹಿ ಚಂದ್ರು ತಲೆ ಅಲ್ಲಾಡಿಸೋಲ್ವೆ?ಹಂಗೆ.
ಇರಲಿ ಈ ವಿಚಾರ ಯಾಕೆ ಬಂತಪ್ಪಾ ಅಂದ್ರೆಮೊನ್ನೆ ಬೆಳಿಗ್ಗೆ ಬೆಳಿಗ್ಗೆ ಟೀವಿ ಹಾಕಿದ್ರೆ ಯಾವುದೊ ಒಬ್ಬ ಜ್ಯೋತಿಷಿದು ಕಾರ್ಯಕ್ರಮ ಬರ್ತಾ ಇತ್ತು. ಅಡುಗೆ ಮನೇಲಿ ಇದ್ದ ಹೆಂಡತಿ ಕಾರ್ಯಕ್ರಮನ ಅದೆಷ್ಟು ಗಮನಿಸ್ತಾ ಇದ್ಲು ಅಂದ್ರೆನಾನು ಕಾಫೀ ಅಂತ ಕಿರುಚಿದ್ದು ಕೇಳಿಸಲೇ ಇಲ್ಲ! ಸ್ವಲ್ಪ ಹೊತ್ತಾದ ಮೇಲೆ ಕಾಫಿ ಜೊತೆ ಬಂದಾಗನನ್ನ ಸಾತ್ವಿಕ! ಸಿಟ್ಟನ್ನು (ದೈರ್ಯದಿಂದಲೇ) ತೋರ್ಪಡಿಸಿ ಬಿಟ್ಟೆ. ನೀವು ಹೆಂಗಸರು, ಬರೀ ಇಂತದ್ದು ನೋಡಿ ಹಾಳಾಗ್ತಿರಿ. ಉಪಯೋಗಕ್ಕೆ ಬರೋದು ಒಂದಾದ್ರು ನೋಡಬಾರದೇಚಂದನ ಅನ್ನೋ ಚಾನೆಲ್ ಇದೆಅದರಲ್ಲಿ ಬೆಳಿಗ್ಗೆ ಯೋಗ - ವ್ಯಾಯಾಮ - ಹೆಲೋ ಗೆಳೆಯರೇ ಮುಂತಾದ ಕಾರ್ಯಕ್ರಮ ಬರುತ್ತೆ ಗೊತ್ತೇ? ಉಪಯೋಗಕ್ಕೆ ಬಾರದೆ ಇರೋದನ್ನ ನೋಡಿದುಡ್ಡು ವೇಸ್ಟ್ ಮಾಡ್ತೀರಿ ಅಂದೆ. ಆದರೆ ಹಂಗೆಲ್ಲಾ ನನ್ನಾಕೆ ಸೋಲುವವಳೇ ಅಲ್ಲ. ಸ್ವಲ್ಪ ಹೊತ್ತು ಆ ಕಡೆಯಿಂದ ಯಾವುದೇ ಬಾಣ ಬರಲಿಲ್ಲ. ಅನುಭವದ ಪ್ರಕಾರ ಹೆಂಡತಿಯ ಮೌನ ಯಾವುದೋ ಭಯಂಕರ ಬ್ರಹ್ಮಾಸ್ತ್ರದ ಮುನ್ಸೂಚನೆ. ಮುನ್ನೆಚರಿಕೆ ಒಳ್ಳೆಯದು. 

ಒಂದೈದು ನಿಮಿಷಗಳಲ್ಲಿ ತಟ್ಟೆ ಪೂರ ಪೂರಿ ಹಾಗು ಗಟ್ಟಿ ಚಟ್ನಿಯೊಂದಿಗೆ ಬಂದುನೀವು ದಿನಾ ವಟ ವಟ ಅನ್ನೋ ಅರ್ನಾಬ್ ಗೋಸ್ವಾಮಿ ಕಾರ್ಯಕ್ರಮ ನೋಡ್ತಿರಲ್ಲ?ಕನಿಷ್ಠ ಅರ್ದ ನಿಮಿಷ ಯಾರಾದರೂ ಅರ್ಥ ಆಗೋ ಹಾಗೆ  ಮಾತಾಡುತ್ತಾರ? ಬರೀ ಗಲಾಟೆ.  ಇನ್ನು ಸಾಗರಿಕ ಚೆನ್ನಾಗಿದ್ದಾಳೆ ಅಂತ ಆಕೆಯ ತಲೆ ಬುಡವಿಲ್ಲದ ಚರ್ಚೆ ಕೂಡ ನೋಡ್ತಿರಿ. ನ್ಯೂಸ್ ಓದೋಳು ಚೆನ್ನಾಗಿದ್ರೆ ನೀವು ಅರಾಬಿಕ್ರಶಿಯನ್ ಚಾನೆಲ್ ಯಾವುದಾದರೂ ಆದೀತು. ಇದೆಲ್ಲಕಿಂತ ಬ್ರಹ್ಮಾಂಡ ಯಾವ ಮಟ್ಟದಲ್ಲಿ ಕೆಟ್ಟದ್ದುಅದೇನೋ ಯೋಗ ವ್ಯಾಯಾಮ ಅಂದ್ರಲ್ಲಅದನ್ನ ನೀವು ಮಾಡಿದ್ದೀರಾದಿನ ಒ೦ಬತ್ತು ಘಂಟೆ ತನಕ ಬಿದ್ದುಕೋತಿರಲ್ಲಸ್ವಲ್ಪ ವಾಕ್ – ವ್ಯಾಯಾಮ ಮಾಡಿ ಹೊಟ್ಟೆ ಕರಗಿಸಬಾರದೆ?ಬೀರುನಲ್ಲಿ ಟೈಟ್ ಅಂತ ಇಟ್ಟ ೪ ಜೀನ್ಸ್ ನ ಬೆಲೆ ಗೊತ್ತೇಬೊಜ್ಜು ಕರಗಿಸಿ ಆ ಪ್ಯಾಂಟ್ ಉಪಯೋಗಿಸಬಾರದೇಕೆ? ಎಂದು ಟಾಂಗ್ ಕೊಟ್ಟಳು.

ನಾನು ಹಂಗೆಲ್ಲಾ ಹೆಂಡತಿ ಜೊತೆ ಚಾಲೆಂಜ್ ಒಪ್ಪುವವನೇ ಅಲ್ಲ. ಕೊನೆಯ ಫಲಿತಾಂಶ ಗೊತ್ತಿದ್ದ ಮೇಲೂ ಯಾರು ಜೂಜು ಆಡುವರುನಾನು ಮನೆಗೆ ಬರುವಾಗಲೇ 10 ಗಂಟೆ ಆಗಿರುತ್ತೆ. ಊಟ ಮಾಡಿಸ್ವಲ್ಪ ಏನಾದ್ರು ಓದಿ ಮಲಗೋ ಹೊತ್ತಿಗೆ 12 ಆಗಿರುತ್ತೆ. ಇನ್ನು ಬೆಳಿಗ್ಗೆ ಬೇಗ ಹೇಗೆ ಏಳಲಿಕ್ಕೆ ಆಗುತ್ತೆನಿನಾದ್ರು ಮೂರು ಹೊತ್ತು ಮನೇಲಿ ಕೂತಿರ್ತಿ (ಯಾಕೋ ಈ ಮಾತು ಬೇಡ ಆಗಿತ್ತು ಅಂತ ಆಮೇಲೆ ಅನ್ನಿಸ್ತು)ನಿಂಗೆ ಹೆಂಗೆ ಗೊತ್ತಾಗಬೇಕು ನಮ್ಮ ಕಷ್ಟ ಎಂದು ಚಿಕ್ಕ ಭಾಷಣ ಮುಗಿಸುವ ಹೊತ್ತಿಗೆ,ಆಕೆಗೆ ನನ್ನಿಂದ ಹರ್ಟ್ ಆಗಿದೆ ಅಂತ ಕೆಂಪಾದ ಕಣ್ಣುಗಳಿಂದ ಗೊತ್ತಾಗತೊಡಗಿತ್ತು.

ಅದೆಲ್ಲಾ ಮಾತು ಬೇಡ. ನಾನು ಸುಮ್ನೆ ಮನೇಲಿ ಇರ್ತಿನೋ ಇಲ್ವೋ ಅದನ್ನು ಆಮೇಲೆ ನೋಡೋಣ. ನೀವು ಒಂದು ತಿಂಗಳು ಬೆಳಿಗ್ಗೆ ವಾಕ್  ಮಾಡಿ ತೋರಿಸಿ. ಆಮೇಲೆ ನಾನು ಈ ಭವಿಷ್ಯ ಕಾರ್ಯಕ್ರಮ ಏನುನೀವು ಮನೇಲಿ ಇದ್ದಾಗ ಧಾರವಾಹಿ ಕೂಡ ನೋಡೋಲ್ಲ ಅಂತ ಘನ ಗೊರ ಘೋಷಣೆ ಮಾಡಿದಳು. ಇತಿಹಾಸದಲ್ಲಿ ಆಕೆಯೊಡನೆ ನಾನು ಒಂದೇ ಒಂದು ವಾಗ್ಯುದ್ದವಾಗಲಿ, ಕಟ್ಟಿದ್ದ ಪಂದ್ಯವಾಗಲಿ ಗೆದ್ದಿಲ್ಲ. (ಆ ವಿಚಾರ ಬೇರೆ ಬಿಡಿ!) ಆದರೆ ಅವಾಗ-ಅವಾಗ ಮೀಟಿಂಗ್ - ಆನ್ ಕಾಲ್ ಸಪ್ಪೋರ್ಟ್ ಅಂತ ಹೇಳಿ 5 ಘಂಟೆಗೆಲ್ಲಾ ಒಮ್ಮೊಮ್ಮೆ ಎದ್ದೇಳೋ ನಾನು ... 6 ಘಂಟೆಗೆ ಎದ್ದು ಒಂದು ಅರ್ದ ಘಂಟೆ ವಾಕ್ ಮಾಡುವುದು ಅಸಾದ್ಯವೇ ಅಲ್ಲ ಅಂತ ಅನ್ನಿಸಿತು. ಅಕಸ್ಮಾತ್ ಗೆದ್ದಲ್ಲಿ, ರಿಮೋಟ್ ಕಂಟ್ರೋಲ್ ಮೇಲೆ ಸಿಗುವ ಸಾರ್ವಭೌಮತ್ವ  ಹೆಂಡತಿಯ ಸವಾಲನ್ನು ಅತ್ಯಂತ ದೈರ್ಯದಿಂದ ಸ್ವೀಕರಿಸಲು ಪ್ರಚೋದಿಸಿತು. ಅಂದು ಭಾನುವಾರವಾದ್ದರಿಂದ ಹರಟೆ ಹೊಡೆಯುತ್ತಾತಿನ್ನುತ್ತಾ ಹಾಗು ಸೊಂಪಾದ ನಿದ್ರೆಯೊಂದಿಗೆ ಕಳೆಯಿತು. 

ಆದರೆ ಸೋಮವಾರ ದಿನ ಬೆಳ್ಳಂ ಬೆಳಿಗ್ಗೆ ಅಲಾರಂ ಬಡಿದಾಗಲೇ ಎಚ್ಚರವಾಗಿದ್ದು. ಆಕೆ ಎದ್ದುಹೊರಗೆ ರಂಗವಲ್ಲಿ ಬಿಡುತ್ತಾ ಇದ್ದಳು. ನಾನು ರಣ ಉತ್ಸಾಹದಲ್ಲಿ ತಯಾರಾಗಿ ಹೊರಟೆ. ಬರುವಾಗ ಮೂಲೆ ಅಂಗಡೀಲಿ ಹಾಲು ತನ್ನಿ ಅನ್ನುವ ಕೋರಿಕೆ ಬಂದಾಗ ಹ್ಞೂ೦ ಗುಟ್ಟಿ ನಡೆದೆ. ಸ್ವಲ್ಪ ಹೊತ್ತಿನ ನಂತರ ಮೈ ಎಲ್ಲಾ ಹಗುರ ಎಂದೆನಿಸಿತು. ವಾಪಸ್ಸು ಹೊರಡುವಾಗ ಹಾಲಿನ ವಿಚಾರ ಕೂಡ ನೆನಪು ಆಯಿತು. ಮುಂಜಾನೆಯ ನಡಿಗೆಮೆದುಳನ್ನು ಚುರುಕು ಗೊಳಿಸುತ್ತೆ ಎನ್ನುವ ಆವಿಷ್ಕಾರದೊಂದಿಗೆ ಹಾಲು ಕೊಂಡು ಮನೆಗೆ ನಡೆದೆ. ಮ್ಯಾನೇಜರ್ ಗೆ ಕೂಡ ಬೆಳಿಗ್ಗೆ ವಾಕ್ ಮಾಡಲು ಹೇಳಬೇಕುಆತನಿಗೂ ಮೆದುಳು ಸುಸ್ಥಿತಿಗೆ ಬಂದುಕಳೆದ ವರುಷ ಕೊಟ್ಟ ಭರವಸೆಗಳು ನೆನಪಿಗೆ ಬಂದು ನನ್ನ ಜೀವನ ಉದ್ದಾರ ಆಗಬಹುದು ಅಂತಲೂ ಅನ್ನಿಸಿತು. ನಿಧಾನಕ್ಕೆ ಸ್ನಾನ ಮಾಡಿಗಡಿ ಬಿಡಿ ಇಲ್ಲದೆ ತಿಂಡಿ ತಿಂದು ಆಫೀಸ್ ಸೇರಿದಾಗ ನಿಜಕ್ಕೂ ತಾಜಾ ಉಲ್ಲಾಸ ಬಂದ ಹಾಗೆ ಇತ್ತು. ಅಂದು ಯಾರನ್ನೂ ಬೈಯದೆ, ಈ ತಪ್ಪಿಗೆ ಪಕ್ಕದವನೇ ಕಾರಣ ಎಂಬ ಸಬೂಬು ನೀಡದೆ ಕ್ರಿಯಾತ್ಮಕವಾಗಿ ಕಳೆದೆ. ರಾತ್ರೆ ಹೆಂಡತಿ ಟೊಮೇಟೊ ಸಾರು ಮಾಡಿದ್ದರೂ ಕೂಡ, ಅದನ್ನು “ಮಜ್ಜಿಗೆ ಹುಳಿ” ಮಟ್ಟಿಗೆ ಹೊಗಳಿ ಅಟ್ಟಕ್ಕೆರಿಸಿದೆ. ಆದರೆ ಮಲಗುವಾಗ ಮದ್ಯರಾತ್ರೆ ಆಗಿದ್ದರೂ "ನಾಳೆ ಬೆಳಿಗ್ಗೆ 5 ಗಂಟೆ ಗೆ ನೀರು ಬರುತ್ತೆಸ್ವಲ್ಪ ಬೇಗ ಎದ್ದು ಹಿಡಿದು ಬಿಡಿ" ಎಂಬ ಹೆಂಡತಿಯ ಕೋರಿಕೆಯನ್ನ ಒಪ್ಪಿದೆ. 
ಎರಡನೇ ದಿನ ಅಂತಾ ದೊಡ್ಡ ತೊಂದರೆ ಇಲ್ಲದೆ ಕಳೆದು ಹೋಯಿತು. ದಿನಕ್ಕೆ ಕೇವಲ 4 – 5  ಗಂಟೆ ನಿದ್ದೆಮಾಡಿಯೂ ಮನುಷ್ಯ ಅತ್ಯಂತ ಚಟುವಟಿಕೆ ಇಂದ ಇರಬಹುದು ಎಂದು ಸಾಬೀತು ಮಾಡಿದೆ. ಆದರೆ ಬುಧವಾರ ಯಾಕೋ ಆಫೀಸ್ ನಲ್ಲಿ ಮಂಪರು ಕವಿದಂತೆ ಅನ್ನಿಸಿತು. ರಿವ್ಯೂ ಮೀಟಿಂಗ್ ನಲ್ಲಿ ತೂಕಡಿಸಿದ ಅನುಭವೂ ಆಯಿತು! ಅಂದು ಸಂಜೆ ಬೆಂಗಳೂರಲ್ಲಿ ಮಳೆ ಬಂದು ಎಲ್ಲಾ ಟ್ರಾಫಿಕ್ ವ್ಯವಸ್ತೆ ಅದ್ವಾನ ಆಗಿ ಮನೆ ತಲುಪುತ್ತಾ 12 ಆಗಿ ಬಿಟ್ಟಿತ್ತು! ರಾತ್ರಿ ಊಟಮಾಡುವಾಗ ನನ್ನವಳು ಅಂದಿನ ವಿಶೇಷ ದಾರಾವಾಹಿ ಬಗ್ಗೆ ಕೊಟ್ಟ ವಿವರಣೆಹೊಲಿಗೆ ತರಗತಿ ಮೇಡಂ ಬಗ್ಗೆ ಮಾಡಿದ ಟೀಕೆ, ಹವಾಮಾನ ವರದಿ ಯಾವುದೂ ತಲೆಗೆ ಹೋಗದೆಸೊಳ್ಳೆ ಗುಯ್ ಗುಟ್ಟಿದಂಗೆ ಅನ್ನಿಸಿತು. ಆದರೆ ಹೇಳಲು ಧೈರ್ಯ ಬರಲಿಲ್ಲ.

ಗುರವಾರ ದಿನ ವಿಪರೀತ ಕೆಲಸಹಲವು ಮೀಟಿಂಗ್ ಕೂಡ ಇದ್ದಿದ್ದರಿಂದ ತೂಕಡಿಸಲೇಬಾರದು ಎಂದು ನಿರ್ಧರಿಸಿದೆ. ವಾಕ್ ಮುಗಿದ ನಂತರ ಅರ್ಜೆಂಟ್ ಕೆಲಸ ಇದೆ,ಬೆಳಿಗ್ಗೆ ತಿಂಡಿ ಏನೂ ಬೇಡ. ಸ್ಟ್ರಾಂಗ್ ಕಾಫಿ ಸಾಕು ಎಂದು ಹೇಳಿ ಕಂಪ್ಯೂಟರ್ ಮೊರೆ ಹೊಕ್ಕೆ. ಕೂಡಲೇ ಅಡುಗೆ ಮನೆಯಿಂದ ನೀರು ದೋಸೆಯ "ಚೊಂಯ್" ಶಬ್ದ ನಿಂತಂತೆ ತೋರಿತು. ಮಧ್ಯಾಹ್ನ ಕೂಡ ಬ್ರೆಡ್ ತಿಂದು ಮದ್ಯ ಮದ್ಯ ಹಲವು ಟೀ ಗಳ ಪ್ರಯೋಗಕ್ಕೆ ಮನಸ್ಸು ಮಾಡಿದೆ. ಅಂದು ಯಾವ ಕೆಲಸವೂ ಸರಿ ಮಾಡಲಾಗಲಿಲ್ಲ. ಮನೆ ತಲುಪುವುದು ಕೂಡ ತಡ ಆಯಿತು. ರಾತ್ರಿ ಮಜ್ಜಿಗೆ ಹುಳಿಯ ರುಚಿ ಬಾಯಿಗೆ ಸಿಗಲಿಲ್ಲ. ಟೀವಿಯಲ್ಲಿ ಅರ್ನಾಬ್/ ಸಾಗರೀಕ ರ ಕಾರ್ಯಕ್ರಮ ಬರುತ್ತಿದ್ದರೂ ನೆಟ್ಟಗೆ ಹಾಸಿಗೆ ಸೇರಿಬಿಟ್ಟೆ. ಶುಕ್ರವಾರ ಬೆಳಿಗ್ಗೆ 4 ಗಂಟೆಗೆಲ್ಲಾ ಆಸ್ಟ್ರೇಲಿಯಾ ಟೀಂ ಜೊತೆ ಮೀಟಿಂಗ್ ಇದ್ದಿದ್ದರಿಂದ5 ಗಂಟೆಗೆ ನೀರು ಬರುವುದರಿಂದ ಬೇಗ ಎದ್ದೆಳಬೇಕಾಯಿತು. ಅಂದು ಆಫೀಸಿನಲ್ಲಿ ಎಸ್ಕಲೆಶನ್ ಗಳ ಸರಮಾಲೆ. ಮೇಲಧಿಕಾರಿಯ ಬೈಗುಳಸಮುದ್ರದಾಚೆಯವನ ಅಸಹನೆಹಳೆ ಗೆಳತಿ ಕಳುಹಿಸಿದ ಎಸ ಎಂ ಎಸ.. ಎಲ್ಲವೂ ಒಂದೇ ರೀತಿ ಕಂಡು ದೈವೀಕ ಸ್ಥಿತಿಗೆ ಹೋದೇನೋ ಎಂದೆನಿಸಲು ಶುರು ಆಯಿತು. ಜೊತೆಗೆ ತಲೆ ಬಾರಮೈ ಕೈ ನೋವು ಬೇರೆ. ಹಂಗೂ ಹಿಂಗೂ ದಿನ ತಳ್ಳಿ ಮನೆ ಸೇರೋ ಹೊತ್ತಿಗೆ ಜ್ವರ ಕೂಡ ಬಂದ ಹಾಗೆ ಇತ್ತು. ಆದರೂ ಯಾವುದನ್ನೂ ಅಷ್ಟಾಗಿ ತೋರಿಸಿ ಕೊಳ್ಳದೆಆಫೀಸ್ ನಲ್ಲಿ ಟೀ ಕುಡಿದಿದ್ದು ಜಾಸ್ತಿ ಆಗಿದೆಈಗ ಹೊಟ್ಟೆ ತುಂಬಾ ತಿಂದರೆ ಬೆಳಿಗ್ಗೆ ಎದ್ದೆಳೋದು ಕಷ್ಟ ಆಗುತ್ತೆ ಎಂದಷ್ಟೇ ಹೇಳಿನನ್ನವಳ ಮುಖ ಕೂಡ ನೋಡದೆ ಮಲಗಿ ಬಿಟ್ಟೆ.
5 ದಿನ ಆಗುವುದರೊಳಗೆ ಸುಸ್ತಾದ ದೇಹ ಕಂಡು ನನಗೆ ಬೇಸರ ಆಗಿ ಬಿಟ್ಟಿತು. ಹಿಂದೆ ಕಾಲೇಜು ಪರೀಕ್ಷಾ ಸಮಯದಲ್ಲಿ ದಿನ ಗಟ್ಟಲೆ ನಿದ್ದೆ ಬಿಡುತ್ತಾ ಇದ್ದಿದ್ದು ಉಂಟು. ಈಗ ಏಕೆ ಇಷ್ಟು ಸುಸ್ತುನನ್ನಾಕೆ ಸ್ವಲ್ಪ ಹೊತ್ತಿನ ನಂತರ ಬಂದು ಎದೆಯ ಮೇಲೆ ತಲೆ ಇಟ್ಟುಏನಾಯಿತು ಎಂದು ವಿಚಾರಿಸಿದರೂ ಉತ್ತರ ಕೊಡಲೂ ಸಾಧ್ಯ ಆಗಲಿಲ್ಲ. ಯಾವಾಗ ನಿದ್ರೆ ಆವರಿಸಿತೋಕಣ್ಣು ಬಿಟ್ಟಾಗ ಜೋರು ಬೆಳಕಾಗಿದ್ದು ತಿಳಿಯಿತು. ಅಯ್ಯೋ ವಾಕಿಂಗ್ ಅನ್ನುವಷ್ಟರಲ್ಲಿ ಬಾಯಿ ಮೇಲೆ ಕೈ ಬಿತ್ತು. ಅವಳ ಕಣ್ಣುಗಳು ಕೆಂಪಾಗಿದ್ದವು. ಭಾಗಷ್ಯ ರಾತ್ರೆ ಎಲ್ಲ ನಿದ್ರೆ ಮಾಡಿಯೇ ಇರಲಿಲ್ಲ.
ರೀಸಾರಿ. ಅದ್ಯಾಕೆ ನನ್ನ ಮಾತು ಅಷ್ಟು ಸೀರಿಯಸ್ ಆಗಿ ತೆಗೆದು ಕೊಂಡ್ರಿನೀವು "ಮನೆಲೇ ಕೂತಿರ್ತಿಟೀವಿ ನೋಡ್ತಿ” ಅಂತೆಲ್ಲಾ ಹೇಳಿದಾಗ ಬೇಜಾರ್ ಆಗಿ ಬೆಳಿಗ್ಗೆ ಒಂದಿಷ್ಟು ವಾಕ್ ಮಾಡಿ ಅಂದೆ. ಆದ್ರೆ ನಿಮಗೆ ಇಷ್ಟು ತೊಂದರೆ ಆಗುತ್ತೆ ಅಂತ ಗೊತ್ತಿರಲಿಲ್ಲ. ಊಟ ತಿಂಡಿ ಬಿಟ್ಟುನಿದ್ದೆ ಮಾಡದೆ ಅರೋಗ್ಯ ಹಾಳು ಮಾಡ್ಕೊಳೋದು ಇವತ್ತಿಂದ ಕೂಡದು. ನೀವು ಹಿಂಗೆ ಬಸರಿ ಹೊಟ್ಟೆಹಳದಿ ಹಲ್ಲುಬಕ್ಕತಲೆ....ಹೆಂಗೇ ಇದ್ರೂ ನಂಗೆ ಇಷ್ಟ. ಈ ಟ್ರಾಫಿಕ್ಕೆಲಸದ ಒತ್ತಡದ ನಡುವೆ ಒಳ್ಳೆಯ ನಿದ್ರೆ ತೀರ ಅಗತ್ಯ. ನಾನು ಅದನ್ನೇ ಹಾಳು ಮಾಡಿ ಬಿಟ್ಟೆ ಅಂತ ಹೇಳುತ್ತಾ ಇರುವಾಗ ನಾನು ಆಕೆಯ ಬಾಯಿ ಮುಚ್ಚಿದೆ.
ನಾನು ಸಾರಿ ಕಣೆ ಅಂದೇಆಕೆ ಅಡ್ಡ ಮಾತು ಹಾಕಿ... ಮತ್ತೇನಲ್ಲತೀರ ಸಣ್ಣ ಆಗಿ ಎದುರು ಮನೆ ಹುಡುಗಿಗೆ ಲೈನ್ ಹೊಡೆಯೋದು ಬೇಡ ಅಂತ ಅಷ್ಟೇ ಎಂದೇಳಿ ಕಾಫಿ ತರಲು ಅಡುಗೆ ಮನೆಗೊಡಿದಳು.

ನಾನು ಹಾಗೆಯೇ ಮುಸುಕೆಳೆದುಕೊಂಡ ಮೇಲೆ, ಮತ್ತೆಂದೂ ಈ ರೀತಿಯ ಸಾಹಸಕ್ಕೆ ಕೈ ಹಾಕಿಲ್ಲೆಂದು ಹೇಳಬೇಕಿಲ್ಲವಷ್ಟೇ.

Saturday, May 9, 2015

ಇಗೋ ಬಂತು, ಬೆಂಗಳೂರಿನ ಟ್ರಾಫಿಕ್ ಗೆ ಪರಿಹಾರ!


ನೀವು ಬೆಂಗಳುರಿನಂತ ಊರಿನಲ್ಲಿ ಜೀವಿಸುತ್ತಿದ್ದರೆ (ಜೀವ ಇಲ್ಲ ಅಂದ್ರೆ ಇದನ್ನು ಓದುವ ಸಾಧ್ಯತೆಯೇ ಇಲ್ಲ ಬಿಡಿ ) ನಿಮಗೆ ಟ್ರಾಫಿಕ್ , ಅರ್ಥಾತ್ ವಾಹನ ದಟ್ಟಣೆಯ ಸಮಸ್ಯೆ ಎದುರಿಸಿಯೇ ಇರುತ್ತೀರಿ. ಎಷ್ಟು ಬೇಗ ಹೊರಟರೂ ಸರಿಯಾದ ಸಮಯಕ್ಕೆ ಕಛೇರಿ ತಲುಪಲಾಗದೆ ಮೇಲಧಿಕಾರಿ ಇಂದ (ಫೀಮೇಲ್ ಅಧಿಕಾರಿ ಕೂಡ ಆಗಿರಬಹುದು) ಆಮೇಲೆ ವಾಪಾಸು ಮನೆಗೆ ಸರಿಯಾಗಿ ತಲುಪಲಾಗದೆ ಮನೆಯವರಿಂದ ಬೈಯಿಸಿ ಕೊಂಡಿರುತ್ತಿರಿ. ಇಷ್ಟೇ ಅಲ್ಲ, ಮದುವೆ ಮನೆಗೆ ಮುಹೂರ್ತದ ಸಮಯಕ್ಕೆ ಹೊರಟರೆ, ಊಟದ ಸಮಯಕ್ಕೆ ತಲುಪುವುದೂ ಅನುಮಾನ. ರಾತ್ರೆ ಊರಿಗೆ ಹೋಗಲು ಬಸ್ಸು ಹಿಡಿಯಲು ಮೆಜೆಸ್ಟಿಕ್ ಗೆ ಹೋಗಬೇಕು ಅಂದರೆ, ನೀವು ಸಂಜೆಯೇ ಹೊರಡಬೇಕು. ಮದ್ಯೆ ಮಳೆ ಬಂದರೆ, ನಿಮ್ಮ ಮನೆ ದೇವರೂ ಕೂಡ ನಿಮ್ಮನ್ನು ಬಸ್ಸು ನಿಲ್ದಾಣಕ್ಕೆ ತಲುಪಿಸಲಾರ.

ಇರಲಿ ಪಟ್ಟಿ ಮಾಡುತ್ತಾ ಹೋದರೆ, ಸಿಲ್ಕ್ ಬೋರ್ಡ್ ಜಾಮಿಗಿಂತ ದೊಡ್ಡದಾದೀತು. ಆದರೆ ಈ ಸಮಸ್ಯೆಯಿಂದ ಮುಕ್ತಿಯೇ ಇಲ್ಲವೇ? ಎಲ್ಲೋ ಓದು ಕಲಿತ, ದ್ವಿಚಕ್ರ ವಾಹನ ಸವಾರರು ಮಾತ್ರ, ಆಂಬುಲೆನ್ಸ್ ಕಂಡ ಕ್ಷಣ ಅದರ ಹಿಂದೆ ಓಡಿ, ತಮ್ಮ ಗಮ್ಯವನ್ನು ಬೇಗನೆ ಸೇರುತ್ತಾರೆ. ಆದರೆ ಶ್ರೀಸಾಮಾನ್ಯನಿಗೆ ಅಂತಹ ಅವಕಾಶ ಎಲ್ಲಿದೆ? ಹಾಗಾಗಿ ನಮ್ಮ ಟೈಮ್ ಪಾಸ್ ತಂಡದ ಏಕ ಸದಸ್ಯ ಪೀಠವು ಹಲವಾರು ಚಿಂತನ – ಮಂಥನ ಸಭೆ ನಡೆಸಿ ಘನತೆವೆತ್ತ ಸರಕಾರಕ್ಕೆ, ಟ್ರಾಫಿಕ್ ಅವ್ಯವಸ್ತೆ ಸುಧಾರಿಸಲು ಕೆಲವೊಂದು ಮಾರ್ಗೋಪಾಯಗಳನ್ನು ನೀಡುತ್ತದೆ.

ಮೊಟ್ಟ ಮೊದಲನೇದಾಗಿ, ನಗರದಲ್ಲಿ ಸಮಸ್ಯೆ ಉಂಟಾಗೋದು ಸರಕಾರೀ ಬಿಎಂಟಿಸಿ ಬಸ್ಸುಗಳಿಂದ. ಅವು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಅಂದ್ರೆ, ಸಿಗ್ನಲ್ ಗಳಲ್ಲಿ, ಮೇಲು ಸೇತುವೆಗಳಲ್ಲಿ, ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಹಾಗು... ಸಾಮಾನ್ಯವಾಗಿ ರಸ್ತೆ ಮದ್ಯ ಭಾಗದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಆ ಬಸ್ಸುಗಳಿಗೆ ಸರಿಯಾದ ನಿರ್ವಹಣೆ ಕೊರತೆ ಇರುವುದೇ ಇದಕ್ಕೆ ಕಾರಣ. ಡೀಸೆಲ್ ದರ ಕಡಿಮೆ ಆಗಿದ್ದರೂ, ಪ್ರಯಾಣ ದರ ಇಳಿಕೆ ಆಗದೆ ಇದ್ದರೂ, ನಿರ್ವಹಣೆ ಮಾತ್ರ ಖೋತಾ.

ಈ ಸಮಸ್ಯೆ ಪರಿಹರಿಸಲು,ಈ ಬಸ್ಸುಗಳನ್ನು ನೇರವಾಗಿ ಅವುಗಳ ಚಾಲಕನಿಗೋ, ಕಂಡಕ್ಟರ್ ಗೋ , ಸರಕಾರವೇ ಸಬ್ಸಿಡಿ ದರದಲ್ಲಿ ಮಾರಿ ಬಿಡಬೇಕು ಅಥವಾ ಬಾಡಿಗೆಗೆ ಕೊಡಬೇಕು. ಪ್ರಯಾಣಿಕರಿಂದ ದುಡ್ಡು ತಗೊಂಡು, ಟಿಕೆಟು ಕೊಡದೆ, ಕೊಟ್ಟರೂ.. ಸರಿಯಾದ ಚಿಲ್ಲರೆ ಕೊಡದೆ ಜನರನ್ನು ಯಮಾರಿಸೋದು ಕಡಿಮೆ ಆಗುತ್ತೆ. ಅದೂ ಅಲ್ಲದೆ ಚಾಲಕರು 35 ರುಪಾಯಿಗೆ ಡೀಸೆಲ್ ಮಾರಾಟ ಮಾಡೋದು ಕೂಡ ಕಡಿಮೆ ಆಗುತ್ತೆ. ಹೆಂಗೂ ತಮ್ಮದೇ ವಾಹನ ಅಂತ ವರು ಸರಿಯಾಗಿ ನೋಡಿಕೊಳ್ಳುತ್ತಾರೆ. ಅತಿ ಹೆಚ್ಚು ಜನ ಸಂದಣಿ ಇರುವ ಸಮಯದಲ್ಲಿ ನಮಗೆ ಬಸ್ಸು ಸಿಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. 
J

ಇನ್ನು ಎರಡನೇದು, ಕೆಲವರು ಒಪ್ಪದೇ ನಂಗೆ ದಿಕ್ಕಾರ ಕೂಗಿದರೂ, ಬಹುಸಂಖ್ಯಾತರು! ಒಪ್ಪಿಯೇ ಒಪ್ಪುತ್ತಾರೆ. ಅದೇನಪ್ಪಾ ಅಂದ್ರೆ, ನಮ್ಮಲ್ಲಿ ಸಾಕಷ್ಟು ಸಲ ಟ್ರಾಫಿಕ್ ಹದಗೆಡಲು, ಅಪಘಾತಗಳು ಉಂಟಾಗಲು ಮಹಿಳಾ ಚಾಲಕಿಯರೇ (ಚಾಲಾಕಿ?) ಕಾರಣ! ಗಾಡಿ ಓಡಿಸ್ತಾ ಇರೋ ಮಹಿಳೆ, ಯಾವಾಗ ಎಡಕ್ಕೆ – ಬಲಕ್ಕೆ ತಿರುಗಿಸುತ್ತಾಳೆ, ಯಾವಾಗ ಬ್ರೇಕು ಹಾಕುವಳು ಅಂತ ಬ್ರಹ್ಮನಿಗೂ ಗೊತ್ತಿರುವುದಿಲ್ಲ. ಆಟೋ ಹಿಂದೆ, ಬ್ಯೂಟಿ ಕೂತಿರೋ ಸ್ಕೂಟಿ ಹಿಂದೆ ... ಎಲ್ಲಿ ಹೋದರೂ ಹೊಗೆ ಖಚಿತ. ಅದೂ ಅಲ್ಲದೆ, ಸುಂದರ ಯುವತಿ ಕಾರು – ಸ್ಕೂಟರ್ ಓಡಿಸ್ತಾ ಇದ್ದರೆ, ಸುತ್ತ ಮುತ್ತ ಇರೋ ಎಲ್ಲಾ ಪಡ್ಡೆ ಗಳಿಗೆ ಹೃದಯ ಬಡಿತ ಹೆಚ್ಚಾಗಿ, ರಸ್ತೆ ಮೇಲೆ ಗಮನ ಕಡಿಮೆ ಆಗಿ, ಸ್ವರ್ಗ ದ ದಾರಿ ಹಿಡಿತಾರೆ. ಸರ್ಕಾರ ಮಹಿಳೆಯರು ವಾಹನ ಚಾಲನೆ ಮಾಡೋ ಹಂಗೆ ಇಲ್ಲ ಅಂತ ಕಾನೂನು ಮಾಡಕ್ಕೆ ಆಗಲ್ಲ. ಹಂಗೆನಾದ್ರು ಮಾಡಿದ್ರೆ, ಬುದ್ದಿ ಜೀವಿಗಳು ಟೌನ್ ಹಾಲ್ ಎದುರು “ಅದು ವಾಹನ ಸಂಸ್ಕೃತಿ ಅಂತ ಹೇಳಿ, ಗೋ ಮಾಂಸ ತಿಂದಂಗೆ... ಕಾರನ್ನೇ ತಿಂದರೂ ಕಷ್ಟ!” ಯಾಕೆ ಅವರಿಗೆ ಕಷ್ಟ ಕೊಡೋದು. ಹಂಗಾಗಿ ವಾರದಲ್ಲಿ ಮೂರುದಿನ ಮಹಿಳೆಯರು – ಮೂರು ದಿನ ಪುರುಷರು ಚಲಾಯಿಸಬೇಕು ಅಂತ ಕಾಯಿದೆ ತರಬೇಕು. ಕನಿಷ್ಠ ವಾರದಲ್ಲಿ ಮೂರು ದಿನ ಗಂಡಂದಿರು ಹಿಂದಿನ ಸೀಟಿನಲ್ಲಿ, ಕುಳಿತು ಆರಾಮಾಗಿ ಕಚೇರಿ ತಲುಪಬಹುದು. ಅದೂ ಅಲ್ಲದೆ, ಸಾಮಾನ್ಯವಾಗಿ ರಸ್ತೆಯಲ್ಲಿ ಕಿರಿ ಕಿರಿ ಆದಾಗ... ಕೊರಳು ಪಟ್ಟಿ ಹಿಡಿದು ಜಗಳ ಕಾಯುವುದನ್ನು ನಾವು ನೋಡಿಯೇ ಇರುತ್ತೀವಿ. ಮುಂದೆ ಇದು, ಹೆಣ್ಣು ಮಕ್ಕಳು ಜುಟ್ಟು ಹಿಡಿದು ಕಿತ್ತಾಡೋದು ನಾವು ನೋಡಬಹುದು. ನಾವು ತಲುಪೋ ಗಮ್ಯ, ತಡ ಆದರೂ, ಮಾರ್ಗ ಮದ್ಯೆ ಮನೋರಂಜನೆಗೆ ಕೊರತೆ ಅಂತೂ ಇರಲ್ಲ. ಹೌದೂ, ಮಿಕ್ಕ 7 ನೆ ದಿನ ಯಾರು ಓಡಿಸಬೇಕು ಅಂತ ನಾನು ಹೇಳಿಯೇ ಇಲ್ಲವಲ್ಲ? ಹೋಗ್ಲಿ ಬಿಡಿ, ಯಾರಾದ್ರು ಓಡಿಸ್ಲಿ. ನಾನಂತೂ ಅವತ್ತು ಮನೇಲಿ ಮುಸುಕೆಳೆದು ಮಲಗುವೆ. J 

ಇನ್ನು ಮೂರನೆದು, ನಮ್ಮ ಐ ಟಿ / ಬೀಟಿ ನಲ್ಲಿ ಕೆಲಸ ಮಾಡೋ ಸಾಕಷ್ಟು ಜನರಿಗೆ ಮನೆಯಿಂದಲೇ ಕೆಲಸ ಮಾಡೋ ಅವಕಾಶ ಇದೆ. ಆದರೆ ಯೋಚಿಸಿ, ಈ ವ್ಯವಸ್ತೆಯಿಂದ ನಾವು ಒಂದು ಸಾಮಾಜಿಕ ಅಸಮತೋಲನಕ್ಕೆ ಕಾರಣ ಆಗುತ್ತಾ ಇದ್ದೀವಿ ಅಂತ. ಬೇರೆ ಯಾರಿಗೂ ಸಿಗದಂತ ಅವಕಾಶ ಅವರಿಗೆ ಮಾತ್ರ ಯಾಕೆ? ನಮ್ಮ ಸರಕಾರೀ ಅಧಿಕಾರಿಗಳಿಗೆ ಯಾಕೆ ಇಲ್ಲ? ಅಕಸ್ಮಾತ್ ನಮ್ಮ ಅಧಿಕಾರಿಗಳಿಗೂ ಸಿಕ್ಕರೆ, ಅವರ ಕಚೇರಿ ಸುತ್ತ ಮುತ್ತ ವಾಹನ ಸಂಚಾರ ಕಡಿಮೆ ಆಗುತ್ತೆ. ಅವರ ಸಹಿ ಬೇಕು ಅಂತ ಅಲೆದಾಡುವ ಸಾಮಾನ್ಯ ಜನ, ನೇರವಾಗಿ ಅಧಿಕಾರಿಯ ಮನೆಗೇ ಹೋಗಿ, ಅಲ್ಲಿಯೇ ಸಹಿ ಹಾಕಿಕೊಂಡು, ಟೇಬಲ್ ಮೇಲೆಯೇ ಕೈ ಬೆಚ್ಚಗೆ ಮಾಡಿ, ಹಿಂತಿರುಗಬಹುದು! ಇದರಿಂದ ಯಾವ ಲೋಕಾಯುಕ್ತ ದವರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ.

ನಮ್ಮ ಮುಖ್ಯ ಉದ್ದೇಶ ಏನು ಅಂದ್ರೆ, ಅತಿ ಮುಖ್ಯ ಪ್ರದೇಶಗಳಲ್ಲಿ ಜನ ಸಂದಣಿ ಅಥವಾ ವಾನಗಳ ಸಂಖ್ಯೆ ಕಡಿಮೆ ಮಾಡುವುದು. ಉದಾಹರಣೆಗೆ, ನಮ್ಮ ಯುವಜನತೆ ಸುಖ ಹಾಗು ನೆಮ್ಮದಿಗಾಗಿ ಅಲೆದಾಡುವ ಎಂ ಜಿ ರೋಡು, ರೆಸಿಡೆನ್ಸಿ ರೋಡು, ಕೋರಮಂಗಲ ಇತ್ಯಾದಿ. ವಾರಾಂತ್ಯಗಳಲ್ಲಿ ಅಂತೂ ಈ ಜಾಗಗಳಲ್ಲಿ ಒಂದು ಸಿಗ್ನಲ್ ದಾಟಲು ಗಂಟಾನುಗಟ್ಟಲೆ ಕಾಯಬೇಕು. ಹಾಗಾಗಿ ಕೂಡಲೇ, ಸರ್ಕಾರವು ಅಲ್ಲಿ ಸಿಗುವ ಸೌಲಭ್ಯ ನ ಜನರಿಗೆ ತಮ್ಮ ತಮ್ಮ ವಾರ್ಡುಗಳಲ್ಲಿ, ಬೀದಿಗಳಲ್ಲಿ ಸಿಗುವ ವ್ಯವಸ್ತೆ ಮಾಡಬೇಕು. ಇತ್ತೀಚಿಗೆ ಸಚೀವರೊಬ್ಬರು ಮತ್ತೆ “ಕೊಟ್ಟೆ ಸರಾಯಿ” ಜಾರಿಗೆ ತರುವ ಮಾತು ಆಡುತ್ತಿದ್ದರು. ಇದು ಆಗದೆ ಹೋದರೂ, ಬೆಂಗಳುರಿನಂತ ಊರಿನಲ್ಲಿ ಎಲ್ಲರಿಗೂ ಕಾಲ್ನಡಿಗೆಯ ದೂರದಲ್ಲಿ ಸಿಗುವ ಹಾಗೆ ಪಬ್ಬು – ಡಿಸ್ಕೋ ಶುರು ಮಾಡಲು ಅನುಮತಿ ಕೊಡಬೇಕು. ಇದರಿಂದ ಜನ, ನಡೆದೇ ಕಾರ್ಯಸ್ಥಾನ ತಲುಪಬಹುದು. ಎಷ್ಟು ಲೇಟು ಆದರೂ ಚಿಂತೆ ಇಲ್ಲ. ಮನೇಲಿ ಕೂಡ ಅಪ್ಪ – ಅಮ್ಮಂದಿರಿಗೆ ತಮ್ಮ ಮಗ / ಮಗಳು ಎಲ್ಲಿ ಕುಡಿದು ಕುಣಿತಾ ಇದ್ದಾರೆ ಅಂತ ಗೊತ್ತಿರುತ್ತೆ. ಅಷ್ಟರ ಮಟ್ಟಿಗೆ ಅವರ ಚಿಂತೆ ಕಡಿಮೆ ಆಗುತ್ತೆ! ಅಥವಾ ತನ್ನ ಗಂಡ ಕುಡಿದು, ಮನೆಗೆ ಕೂಗಳತೆಯ ದೂರದಲ್ಲಿ ಇರಬಹುದಾದ ಯಾವುದೋ ಒಂದು ಮೋರಿಯಲ್ಲಿ ಇದ್ದಾನೆ ಅಂತ ಹೆಂಡತಿಗೂ ಗೊತ್ತಿರುತ್ತೆ.! ಇದರಿಂದ ಸರಕಾರಕ್ಕೆ ಜಾಸ್ತಿ ದುಡ್ಡು, ಜನಕ್ಕೆ ಪೆಟ್ರೋಲ್ ಉಳಿತಾಯ. ಆ ಉಳಿತಾಯದ ದುಡ್ಡಲ್ಲಿ ಮತ್ತೂ ಒಂದು ಪೆಗ್ಗು ಹೋಡೀಬಹುದು. ಯಾಕೆ ಹೇಳಿದೆ ಅಂದ್ರೆ, ಡಿಸ್ಕ್ ನ ಒಳಗೆ ರಶ್ ಇರಬೇಕೇ ಹೊರತು, ಹೊರಗೆ ರಸ್ತೆ ಮೇಲೆ ಅಲ್ಲ.

ಇಷ್ಟನ್ನು ಮಾಡಿದರೆ ನಮ್ಮ ಟ್ರಾಫಿಕ್ ಸಮಸ್ಯೆ ಸಾಕಷ್ಟು ಕಡಿಮೆ ಆಗುವುದು.

ಇಷ್ಟು ಮಾಡಿದ ಮೇಲೂ ಪುರಸೊತ್ತು ಇದ್ರೆ, ಟ್ರಾಫಿಕ್ ಸಮಸ್ಯೆ ಸರಿಪಡಿಸುವ ಬದಲು, ಎಲ್ಲೋ ಟೀ ಅಂಗಡಿಯ ಮರೆಯಲ್ಲಿ ಕದ್ದು ಕುಳಿತು, ತಮ್ಮ ಕೇಸುಗಳ ಟಾರ್ಗೆಟ್ ಬಗ್ಗೆ ತಲೆ ಕೆಡಿಸಿ ಕೊಳ್ಳುವ (ಜೇಬು ಭರ್ತಿ ಕಾರ್ಯಕ್ರಮ ಕೂಡ) ಟ್ರಾಫಿಕ್ ಪೊಲೀಸರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಡಬೇಕು! ಆದರೆ ಅದರಿಂದ ಅವರಿಗೆ ಉಂಟಾಗುವ ಗಿಂಬಳದ ನಷ್ಟ ತಡೆಯಲು  ಟ್ರಾಫಿಕ್ ಪೋಲೀಸರ ಕ್ಷ್ಮೆಮಾಭಿವೃದ್ದಿಗೆ ಅಂತ ಒಂದು ನಿಧಿ ಸ್ಥಾಪನೆ ಮಾಡಬೇಕು. ಹೆಲ್ಮೆಟ್ಟು ಹಾಕದೆ, ಸೀಟು ಬೆಲ್ಟು ತೊಡದ ವಾಹನ ಚಲಾವಣೆ ಜಾಸ್ತಿ ಆಗುವ ಮಾರ್ಗಗಳಲ್ಲಿ ಈ ನಿಧಿಯ ಕಾಣಿಕೆ ಹುಂಡಿ ಇಡಬೇಕು. ಖಂಡಿತವಾಗಿಯೂ ನಮ್ಮ ಜನ ಅದಕ್ಕೆ ಕೈಲಿ ಆದಷ್ಟು ಸಹಕಾರ ಕೊಡುವರು.

ಇಷ್ಟು ಹೇಳಿದ ಮೇಲೆ, ರಸ್ತೆಗಳ ಬಗ್ಗೆ ನೀವು ಹೇಳಿಯೇ ಇಲ್ಲ ಅಂತ ದೂರಬೇಡಿ. ಅದೊಂದು ಜೇಡರ ಬಲೆ. ಸಿಮೆಂಟು ಉತ್ಪಾದಕರ ಒತ್ತಾಯಕ್ಕೆ ಮಣಿದು, ಸರ್ಕಾರ ಏನಾದ್ರು ಅದರಲ್ಲಿ ರಸ್ತೆ ಮಾಡಿದರೂ ಸಮಸ್ಯೆ ಪರಿಹಾರ ಆಗೋಲ್ಲ. ಸಿಮೆಂಟು ಒಣಗುವ ಮುಂಚೆಯೇ, ಒಳಚರಂಡಿ ಮಂಡಳಿಯವರೋ, ವಿದ್ಯುತ್ ಇಲಾಖೆಯವರೋ... ಬಂದು ರಸ್ತೆ ಅಗೆಯುವರು. ಹಂಗಾಗಿ ಒಳ್ಳೆ ರಸ್ತೆ ಅನ್ನೋದು ಚಿತ್ರಗಳಲ್ಲಿ ಮಾತ್ರ ಕಾಣಸಿಗುವುದು. ನಮಗೂ-ಅದಕ್ಕೂ, ಸರಿ ವಾಸ್ತು ಹೊಂದಿ ಬರುವುದಿಲ್ಲ ಬಿಡಿ. ನಿಮಗೆ ಅಷ್ಟಕ್ಕೂ, ಸೊಂಟ ನೋವು ಬರುತ್ತೆ ಅಂದ್ರೆ, ಲ್ಯಾಂಡ್ ರೋವರ್ ಎಸ ಯು ವಿ ತಗೋಳಿ. ಅದು ಪ್ರಪಂಚದ ಎಂತಾ ಕೆಟ್ಟ ದುರಂತ ಪರಿಸ್ಥಿತಿಲೂ ಚೆನ್ನಾಗಿ ಆರಾಮಾಗಿ ಹೋಗುವುದಂತೆ. ನೋಡಿ, ನಮ್ಮ ಸಾಕಷ್ಟು ಮಂತ್ರಿ ಮಹೋದಯರ ಹತ್ರ ಅಂತಹ ದೊಡ್ಡ ದೊಡ್ಡ ಕಾರುಗಳು ಉಂಟು. J

ಇದನ್ನು ಓದಿದ ಮೇಲೆ, ನೀವು ಕೂಡ ನಿಮ್ಮ ಸ್ವಂತ ಮಂಡೆಯಲ್ಲಿ ಬರುವ ಪರಿಹಾರ ಸೂತ್ರಗಳನ್ನು ಕೊಡಬಹುದು. ಹಾಗೆ ಕೊಡುವವರಿಗೆ ಸಿಲ್ಕ್ ಬೋರ್ಡ್ ನಲ್ಲಿ ಟ್ರಾಫಿಕ್ ಜಾಮು ಸಿಗದೇ ಇರಲಿ ಅಂತ ನಮ್ಮ ತಂಡವು ದಯಾಮಯನಾದ ಭಗವಂತನಲ್ಲಿ ಪ್ರಾರ್ಥಿಸುತ್ತದೆ.