Thursday, December 27, 2018

2019 - ಯಾರಾಗ್ತಾರೆ ಪ್ರಧಾನಿ - ಭಾಗ 1




ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆಮುಂದೆ ಯಾರು ಪ್ರಧಾನಿ ಆಗುತ್ತಾರೆಮೋದಿ ಮತ್ತೊಮ್ಮೆ ಬರಬಹುದಾಕಾಂಗ್ರೆಸ್ನ ರಾಹುಲ್ ಆಗಬಹುದೇಅಥವಾ ಅದರ ಮಿತ್ರ ಪಕ್ಷಗಳಿಗೆ ಅವಕಾಶ ಸಿಗಬಹುದೇ ಅನ್ನುವುದು ಈ ಕ್ಷಣದ ಒಳ್ಳೆಯ ಚರ್ಚೆಯ ವಿಷಯ.

ವಯಕ್ತಿಕವಾಗಿ ಅನ್ನಿಸುವುದೇನೆಂದರೆ ನಮ್ಮ ಪ್ರಾದೇಶಿಕ ಪಕ್ಷಕ್ಕೆ ಬಹುಮತ ಸಿಗಬೇಕು. ಕನಿಷ್ಠ.. ಬಹುಮತದ ಸಮೀಪ ಆದರೂ ಬರಬೇಕು. ಆಮೇಲೆ ದೇಶದ ಹಿತದೃಷ್ಠಿಯಿಂದ ನಮ್ಮ ದೊಡ್ಡ ಗೌಡ್ರೆ ಪ್ರಧಾನಿ ಆಗಬೇಕು. ಕಾರಣಗಳು ಕೆಳಗಿನಂತಿವೆ.


1. ಭ್ರಷ್ಟಾಚಾರ ಕಮ್ಮಿ ಆಗುತ್ತೆ.
ಹೌದು. ದೊಡ್ಡ ಗೌಡ್ರು ಕುರ್ಚಿಲಿ ಕುಂತ್ರೆಒಬ್ಬ ಮಗ ಹೋಮುಮತ್ತೊಬ್ಬ ಹಣಕಾಸುಸೊಸೆ ವಿದೇಶಾಂಗಸಿನೆಮಾ ನಟ ಮೊಮ್ಮಗನಿಗೆ  ರಕ್ಷಣೆ ಇತ್ಯಾದಿಯಾಗಿ ಖಾತೆ ಹಂಚಬಹುದು. ಖಾಲಿ ಇರೋ ಮತ್ತೊಬ್ಬ ಮೊಮ್ಮಗನನ್ನ ಕರ್ನಾಟಕದ ಮುಮ ಮಾಡಬಹುದು.
ಸರಿಯಾಗಿ ಯೋಚಿಸಿ. ಇದರಿಂದ ದೇಶಕ್ಕೆ ಆಗೋ ಲಾಭ ಅಷ್ಟಿಟ್ಟಲ್ಲ. ಉದಾಹರಣೆ ಸಮೇತ ವಿವರಿಸಬೇಕು ಎಂದರೆ.. ಹಿಂದಿನ ಸರಕಾರದಲ್ಲಿ ನಡೆದ 2ಜಿ ತರಂಗಾಂತರ ಹಗರಣ ನೆನಪು ಮಾಡಿಕೊಳ್ಳಿ. ದೂರಸಂಪರ್ಕ ಮಂತ್ರಿಗೆ ಇಷ್ಟುಆಮೇಲೆ ಹಣಕಾಸು ಮಂತ್ರಿಗೆ ಇಷ್ಟುಆಮೇಲೆ ಆ ಪಕ್ಷದ ಹೆಡ್ಡಿಗೆ ಇಂತಿಷ್ಟು ಎಂದೆಲ್ಲಾ ಹಂಚಿಕೆ ಆಗಿತ್ತು. ಆದ್ರೆನಮ್ಮ ಪ್ರಾದೇಶಿಕ ಪಕ್ಷ ಬಂದ್ರೆ ಈ ರೀತಿ ನಡೆಯೋಕೆ ಸಾಧ್ಯವೇ ಇಲ್ಲ. ಎಲ್ಲರೂ ಒಂದೇ ಕುಟುಂಬದಿಂದ ಬಂದಿರುವುದರಿಂದನಾಕಾರು ಜನಕ್ಕೆ ನಾಕಾರು ಭಾಗ ಹಂಚುವ ಅಗತ್ಯ ಇರುವುದಿಲ್ಲ. ಈ ಕುಟುಂಬಕ್ಕೆ ಇಷ್ಟು ಅಂತ ಕೊಟ್ಟರೆ ಸಾಕು. ಹಿಂದೆ ದೊಡ್ಡ ಮೇಡಂ ಪಕ್ಷಕ್ಕೆ ಕೊಡ್ತಾ ಇದ್ರಲ್ಲ ಹಾಗೆ. ನೋಡಿಎಷ್ಟು ದುಡ್ಡು ಉಳಿತು ಆಲ್ವಾಅಷ್ಟರ ಮಟ್ಟಿಗೆ ಬ್ರಷ್ಟಾಚಾರ ಕಡಿಮೆ ಆಗುತ್ತೆ.


2. ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ.
ಹೌದು. ದೇಶದ ಅರ್ಥಿಕ ಪರಿಸ್ಥಿತಿ ಖಂಡಿತಾ ಸುಧಾರಿಸುತ್ತೆ. ಯಾಕೆಂದರೆಇವರಾರಿಗೂ ಇಟಲಿ ದೇಶದಲ್ಲಿ ನೆಂಟರಿಲ್ಲಅವರ ಜೀವನ ಸುಧಾರಿಸಬೇಕು ಎಂಬ ತಲೆಬಿಸಿ ಇಲ್ಲ. ಬಂದ ಅಷ್ಟೂ ಹಣ ಬಹುಪಾಲು ದೇಶದ ಒಳಗೇ ಉಳಿಯುತ್ತೆ. ಅದರಿಂದ ರುಪಾಯಿಗೆ ಬಲ ಬರುತ್ತೆ. ಹಾಗಾದಾಗಪೆಟ್ರೋಲ್ ರೇಟು ಇನ್ನೂ ಕಮ್ಮಿ ಆಗುತ್ತೆ. ಪೆಟ್ರೋಲ್ ರೇಟು ಕಮ್ಮಿ ಆದ್ರೆದೇಶ ಏಕ್ದಂ ಉದ್ದಾರ ಆಗುತ್ತೆ. ಇವರೆನಾದ್ರು 4-5 ವರುಷ ಅದೇ ಸ್ಥಾನದಲ್ಲಿ ಇದ್ದರೆಅಮೇರಿಕಾದ ಆರ್ಥಿಕತೆ ಸಿ ಮೈನಸ್ ಗೆ ಹೋದರೂ ಹೋಗಬಹುದು. ಪಾಪ ಟ್ರಾ0ಪು.


3. ಜನರ ಅರೋಗ್ಯ ಸುಧಾರಿಸುತ್ತೆ.
ಇತ್ತೀಚಿಗೆ ನಮ್ಮ ಮಹಾನಗರಗಳ ಜನರಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. (ಇದಕ್ಕೆ ಪರೋಕ್ಷ ಕಾರಣ, ಹೆಚ್ಚಿರುವ ಆಸ್ಪತ್ರೆಅಲ್ಲಿನ ಡಾಕ್ಟರುಗಳ ಮೇಲಿರುವ ಟಾರ್ಗೆಟ್ ಭೂತಸುಖಾ ಸುಮ್ಮನೆ ಮಾಡುವ ಚೆಕಪ್ ಗಳು ಇರಬಹುದು. ಬಿಡಿ ಅದು ಸದ್ಯದ ವಿಷಯ ಅಲ್ಲ) ಕಿರುಧಾನ್ಯಗಳನ್ನು ಕೊಂಡು ತಿನ್ನುವ ಚಟ ಆವರಿಸಿ ಬಿಟ್ಟಿದೆ. ಅದರ ಅಡುಗೆ ಮಾಡುವ ವಿಧಾನ ತಿಳಿಸಿ ಕೊಡಲು ಸಾಕಷ್ಟು ಟೀವಿ ಕಾರ್ಯಕ್ರಮ ಬರುತ್ತಲೇ ಇರುತ್ತೆ. ಅಷ್ಟೇಕೆ ಫೇಸ್ಬುಕ್ಯು ಟ್ಯೂಬ್ ನಲ್ಲಿ ಸಾಕಷ್ಟು ಮಾಹಿತಿ ಸಿಗುತ್ತೆ ಕೂಡ. ನಮ್ಮ ಗೌಡರಿಗೆ ಮುದ್ದೆ ಇಷ್ಟ. ಅಂದ್ರೆ ರಾಗಿಗೆ ಬಹಳ ಜನಪ್ರೀಯತೆ ಸಿಗುತ್ತೆ. ಜನ ಅದನ್ನು ಕೊಳ್ಳಲು ಶುರು ಮಾಡುತ್ತಾರೆ. ಅರೋಗ್ಯ ಹೆಚ್ಚಿಸಿ ಕೊಳ್ಳುತ್ತಾರೆ.


4.ಜನ ಜೀವನ ಸುಧಾರಿಸುತ್ತೆ.
ಮಾಜಿ ಪ್ರಧಾನಿಗಳು ನಿದ್ದೆ ಪ್ರಿಯರು. ಒಹ್ ಸಾರಿ ಹಗಲೊತ್ತು ಅಂತರ್ಮುಖಿಯಾಗಿ ದೇಶದ ಬಗ್ಗೆ ಚಿಂತೆ ಮಾಡುವವರು. ಆದ್ರೆ ಜನ ಇದನ್ನು ನಿದ್ದೆ ಎಂದು ತಿಳಿಯುವರು. ಸಾಕಷ್ಟು ಜನ ರಾತ್ರೆ ಪಾಳಿಯಲ್ಲಿ ದುಡಿಯುವವರು ಕೆಲಸ ಬದಲಿಸಬಹುದು. ಅಥವಾ ಕಂಪನಿಗಳೇ ಬೇರೆ ಕಡೆ ಹೋಗಬಹುದು. ಒಟ್ಟಾರೆ ಕಿರು ಧಾನ್ಯ ತಿಂದು, ರಾತ್ರೆ ಒಳ್ಳೆ ನಿದ್ರೆ ಮಾಡಬಹುದು. ಇದರಿಂದ ಜನ ಜೀವನ ಸುಧಾರಿಸಿ, ಭಾರತ ಖಂಡಿತಾ ವಿಶ್ವಗುರು ಆಗಬಹುದು.


ಈಗ ಒಂದು ಪ್ರಶ್ನೆ. ಅಕಸ್ಮಾತ್ ನಮ್ಮ ಈಗಿನ ಮುಮ ಮುಂದಿನ ಪ್ರಧಾನಿ ಆದ್ರೆ? ಒಬ್ಬ ಕಾರ್ಯಕರ್ತನ ಸಾವಿಗೆ ಶೂಟ್ ಮಾಡಿ ಎಂದವರು, ಪಾಕಿಸ್ತಾನ ನಮ್ಮ ಸೈನಿಕರಿಗೆ ಗುರಿ ಇಟ್ಟರೆ ಬಿಡುತ್ತಾರಾ? ದಿನಕ್ಕೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿ... ಅದನ್ನು ನಾಶ ಮಾಡುವುದಿಲ್ಲವೇ?


ಇರಲಿ. ಈಗ ಇಷ್ಟು ಸಾಕು.
ನಮ್ಮ ಮುಂದಿನ ಸಂಚಿಕೆಯಲ್ಲಿ ಶ್ರೀ ಜೂನಿಯರ್ ಗಾಂಧೀ ಅವರು ಪ್ರಧಾನಿ ಆದರೆ ಆಗುವ ಲಾಭಗಳನ್ನು ವಿವರಿಸುತ್ತೇನೆ.
ಅಲ್ಲಿಯ ತನಕ ನಿಮ್ಮ ಮತಗಳನ್ನು ಪ್ರಾದೇಶಿಕ ಪಕ್ಷಕ್ಕೇ ಮೀಸಲಿಡುವಂತೆ ಕೇಳಿಕೊಳ್ಳುತ್ತೇನೆ.

No comments: