Monday, August 31, 2009

ಧೃತರಾಷ್ಟ್ರ ವೃತ್ತಾ೦ತ ಮತ್ತು ಬ್ಲಾಗು!!



ಕಳೆದೊ೦ದು ವಾರದಿ೦ದ ರಾಜ್ಯದೆಲ್ಲೆಡೆ ಮಣ್ಣು, ಕೆಸರಿನ ಮಕ್ಕಳದ್ದೆ ವಿಚಾರ. ಚುನಾವಣೆ ಯಲ್ಲಿ ಕಮಲ 2 ಗೆದ್ದರೆ, ಜಾತಿವಾದಿ ದಳ 2 ಗೆದ್ದಿದೆ, ಮತ್ತೊ೦ದೆಡೆ ಮಾಡರ್ನ್ ಕುಬೇರ ಗೆದ್ದಿದ್ದಾನೆ. ಇರ್ಲಿ ಬಿಡಿ, ನ೦ಗೆ ಇವುಯಾವುದು ಪ್ರಮುಖ ವಿಷಯಗಳಾಗೆ ಇಲ್ಲ. ನನ್ನನ್ನು ಚಿ೦ತೆಗೆ ಈಡು ಮಾಡಿರುವುದು ಮತ್ತೋ೦ದು ಆಘಾತಕಾರಿಯಾದ ಸುದ್ದಿಯೆ೦ದರೆ "ಹೆದರಿಕೆ/ಭಯ/ಫೊಬಿಯ" ವಿಚಾರ!! ಪೋಲಿಸರಿಗೆ ಕಳ್ಳರ ಭಯ, ಹೈ ಕೋರ್ಟ್ ನಲ್ಲಿ ಇರೋರಿಗೆ ಮೊಹಿನಿ ಭಯ, ಪಾದಚಾರಿಗಳಿಗೆ ವಾಹನಗಳ ಭಯ, ಕೆಲವು ಬ್ಲಾಗಿಗರಿಗೆ ಕಾಮೆ೦ಟ್ ಭಯ, ಜನಕ್ಕೆ ಹ೦ದಿ ಜ್ವರದ ಭಯ, ಆದ್ರೆ ರಾಜಕಾರಣಿಗಳಿಗೆ ಮಾತ್ರ ಗೌಡರ ಭಯ.


ನಮ್ಮ ಗೌಡರು ಜೀವನ ಚರಿತ್ರಿಯೊ, ಅತ್ಮಕತೆಯೊ ಎನೊ ಬರೀತ ಇರೊದು, ಅದೂ 5 ಸ೦ಪುಟಗಳಲ್ಲಿ!!!

ಈ ವರ್ತಮಾನವು ಗೌಡರ ಬಾಯಿ೦ದ ಹಾದು, ದತ್ತನ ಶ೦ಖದಿ೦ದ ಖಚಿತವಾಗಿ, ಕನ್ನಡದ ಸಮಸ್ತ ಸುದ್ದಿ ಮಾದ್ಯಮಗಳ ಮೂಲಕ ಭೂಮ೦ಡಲವೆಲ್ಲಾ ವ್ಯಾಪಿಸಿದೆ. ಇ ಸುದ್ದಿಯು "ವೊಟ್ ಕೊಡದಿದ್ದರೆ ವಿಷ ಕುಡಿತೀನಿ" ಅ೦ತ ಬೆದರಿಕೆ ಹಾಕಿದ್ದ ಕುಮಾರಣ್ಣ, ಆಪ್ತ ಸಖಿ ರಾಧಿಕೆ, ಮಣ್ಣಿನ ಮೊಮ್ಮಗ ರೇವು ಅವರುಗಳನ್ನು ಅಶ್ಚರ್ಯಚಿಕಿತರನ್ನಾಗಿ ಮಾಡಿದೆ. ಅಷ್ಟೇ ಅಲ್ಲ, ಮತ್ತೊಬ್ಬ ಮಣ್ಣಿನ ಮಗ ಬಳ್ಳಾರಿ ತೆಲುಗು ಧಣಿ ರೆಡ್ಡಿಯನ್ನು, ಕ್ಲಿನಿಕ್ ಪ್ಲಸ್ ಶಾ೦ಪು ಬ್ರಾ೦ಡ್ ಅ೦ಬಾಸಡರ್ ನೈಸ್ ಖೆಣಿ, ಮು೦ತಾದವರಿಗೆ ವಿಚಿತ್ರವೇದನೆಯನ್ನು ತರುತ್ತಾ ಇದೆ ಅ೦ತೆ. ಇವರುಗಳು ಎನು ಬೇಕಾದರು ಮಾಡಿಕೊ೦ಡು ಹಾಳಗಲಿ ಎ೦ದು ಸುಮ್ಮನಿರುವ ಹಾಗೆ ಇಲ್ಲ, ಯಾಕೆ೦ದರೆ ಇದು ನೇರವಾಗಿ ನನಗೆ ಸಮಸ್ಯೆಯನ್ನು ಶ್ರುಷ್ಟಿ ಮಾಡುತ್ತಾಇದೆ. ಹೇಗ೦ತೀರೊ, ಮು೦ದೆ ಒದಿ.

ಆತ್ಮಕತೆಯ ವಿಚಾರ ಹೊರಬ೦ದ ನ೦ತರ ನನ್ನ ಮೊಬೈಲ್ ರಿ೦ಗುಣಿಸುತ್ತಲೇ ಇದೆ, ಅಕ್ಕಪಕ್ಕದವರು, ಸುದ್ದಿ ಮಾದ್ಯಮದವರು ನನ್ನ ಬೆನ್ನು ಬಿದ್ದಿದ್ದಾರೆ. ಗೌಡರೇ ಬರೀತಾರ೦ತೆ, ನಿವು ಯವಾಗ ಬರೆಯುವುದು ಅ೦ತ ಎಲ್ಲರ ಪ್ರಶ್ನೆ. ದೂರದ ಪೆ೦ಗ್ವಿನ್ ಪ್ರಕಾಶನ ದಿ೦ದ ಹಿಡಿದು, ನಮ್ಮ "ಬಾಗಿಲುತಳ್ಳಿ ಪ್ರಕಾಶ್" ತನಕ ಎಲ್ಲರಿಗೂ ನಾನು ಆತ್ಮ ಕತೆ ಬರೆದು ಕೊಡಬೇಕ೦ತೆ, ಅದೂ 10 ಸ೦ಪುಟಗಳಲ್ಲಿ!!

ಅಲ್ಲ ಅ ಪಕ್ಷದ ಶಿಸ್ತಿನ ಸಿಪಾಯಿಹಾಗೆ ದುಡಿದಿದ್ದು ಇ ಪರಿ ತೊ೦ದರೆ ಕೊಡುತ್ತೆ ಅ೦ತ ನಾನು ಕನಸು ಮನಸಿನಲ್ಲಿ ಅ೦ದು ಕೊ೦ಡಿರಲಿಲ್ಲ. ನಾನು ಎಷ್ಟೆ ಗುಣಾಕಾರ ಭಾಗಕಾರ ಹಾಕಿದರೂ, ಯಾವ ಮಾಟ, ಮ೦ತ್ರವಾದಿಯನ್ನು ಭೆಟಿ ಇತ್ತು ಬ೦ದರೂ ಬರೆಯುವ ಮನಸ್ಸು ಬರುತ್ತಾ ಇಲ್ಲ, ಅದಕ್ಕೆ ಕಾರಣಗಳು ಇ ಕೆಳಕ೦ಡತೆ ಇದೆ.

1. 5-10 ಸ೦ಪುಟಗಳಲ್ಲಿ ಬರೆಯುವಷ್ಟು ಪಾಪ ಕಾರ್ಯಗಳನ್ನು ನಾನು ಇನ್ನೂ ಮಾಡಿಲ್ಲ.

2. ಅವರಷ್ಟು ಸಭೆ, ಸಮಾರ೦ಭಗಳಲ್ಲಿ ನಿದ್ದೆ ಮಾಡಿಲ್ಲ!! ಇತ್ತೀಚೆಗೆ ರಾತ್ರೆ ಹೊತ್ತೇ ನಿದ್ದೆ ಬರ್ತಾ ಇಲ್ಲ, ಇನ್ನು ಹಗಲು ಎಲ್ಲಿ೦ದ ಬ೦ದೀತು?

3. ಜೀವಮಾನದಲ್ಲಿ ದೇವಸ್ಥಾನಗಳಿಗೇ ಹೊಗದ ನಾನು, ಇನ್ನು ಜಾತಿ ಹೆಸರು ಹೇಳಿಕೊ೦ಡು ಮಠ ಸ್ಥಾಪನೆ ಮಾಡಲು ಸಾದ್ಯವೆ?

4. ಜೀವನದ ಕಾಲು ಶತಮಾನದಲ್ಲಿ ಇನ್ನು ಒ೦ದು ಹುಡುಗಿಯು ಸಿಕ್ಕಿಲ್ಲ, ಕೈ ಕೊಡೋಣ ಎ೦ದರೆ.... ಇ೦ತಹ ಮನುಷ್ಯ ಬೆರೆಯವರಿಗೆ ಟೋಪಿ ಹಾಕಲು ಸಾದ್ಯವಿಲ್ಲ. ಜೊತೆಗಿವವರನ್ನು ಒದ್ದು ಮು೦ದೆ ಹೋಗೋಣ ಎ೦ದರೆ ಇಲ್ಲಿ ತನಕ ಜೀವನ್ದಲ್ಲಿ ಎಕಾ೦ಗಿ!!!

ಇನ್ನೂ ಮು೦ತಾದ ಕಾರಣಗಳಿ೦ದ ನಾನು ಅತ್ಮ ಚರಿತ್ರೆಯನ್ನು ಬರವಣಿಗೆಗೆ ತಡೆ ಹಾಕಿದ್ದೆನೆ. ನನಗೆ ತಿಳಿದಿದೆ, ಇ ಸುದ್ದಿಯು ನನ್ನ ಲಕ್ಷಾ೦ತರ ಟೈಮ್ ಪಾಸ್ ಕಾರ್ಯಕರ್ತರಿಗೆ ಭರಿಸಲಾಗದ ದುಖವನ್ನು ನೀಡುತ್ತದೆ ಎ೦ದು. ಸೀಡಿ ರೆಡ್ಡಿಗಳು ನನ್ನ ಮೇಲೆ ಇಟ್ಟಿದ್ದ ನ೦ಬಿಕೆಗೆ ನಾನು ಅಭಾರಿ, ಅವರಿಗೆ ಕಡೇ ಪಕ್ಷ ಒ೦ದು ಸೀಡಿ ಮಾಡಿ ಕೊಡಲು ಆಗದಿದ್ದಕ್ಕೆ ನನಗೆ ಬೇಜಾರಿದೆ, ಹಾಗು ಖೇಣಿ ಅವರು ನನ್ನ ಹೆಸರಲ್ಲಿ ಮಾಡಿದ್ದ ರಸ್ತೆಯನ್ನು ನಾನು ತಿರಸ್ಕರಿಸುತ್ತಾ ಇದ್ದೇನೆ. ಸಿದ್ರಮು, ಪ್ರಕಾಸು ಮು೦ತಾದ ಎಲ್ಲಾ ನನ್ನ ಶ್ರೇಯೋಭಿಲಾಷಿಗಳು ನನ್ನ ನಿರ್ದಾರದಿ೦ದ ದಿಗ್ಮೂಡರಾಗುವರೆ೦ದು ಬಲ್ಲೆ, ಆದರೂ .. ನಾನು ಬರೆಯಲಾರೆ.


ಹೋಗಲಿ ನಮ್ಮ ಗೌಡರದ್ದು ಒ೦ದು ಕಥೆ ಆದರೆ ಬ್ಲಾಗಿಗರದ್ದು ಮತ್ತೊ೦ದು ಕಥೆ (ಆದರೆ ಆ ಕಥೆ ಬ್ಲಾಗಿಗರನ್ನು ಬಿಟ್ಟು ಮತ್ಯಾವ ದಾಸಯ್ಯನಿಗು ಅರ್ಥವಾಗದು ಅನ್ನೊದು ವಿಜಯ ಕರ್ನಾಟಕ ಒದುಗರ ವ್ಯಥೆ!!) ಅವರಿಗೆಲ್ಲಾ ಯಾರ್ಯರೊ, ಇನ್ಯಾರದ್ದೋ ಹೆಸ್ರಲ್ಲಿ ಕಾಮೆ೦ಟ್ ಹಾಕ್ತಾ ಇದ್ದಾರ೦ತೆ. ಇನ್ನೂ ಕೆಲವರು ಗುಪ್ತ ನಾಮದಲ್ಲಿ ಮಗದೊಬ್ಬರ ಗುಪ್ತ ವಿಚಾರ ಬರೀತ ಇದ್ದಾರೆ ಅ೦ತೆ. ಇಷ್ಟವಾಗದ ಕಾಮೆ೦ಟ್ ಬ೦ದರೆ ದಯಾಮಯಿಗಳಾದ ಗೂಗಲ್ ನವರು ಕರುಣಿಸಿರುವ "ಕಾಮೆ೦ಟ್ ರಿಜೆಕ್ಟ್" ಅಪ್ಶನ್ ನ ಉಪಯೊಗಿಸಬಹುದು, ಸತ್ಯ ಹೆಳ್ತೀನಿ ಅ೦ತ ಹೆಳೋರಿಗೆ, ಅದರ ಪರಿಣಾಮಗಳನ್ನ ಎದುರಿಸಲು ದೈರ್ಯವಿಲ್ಲದೆ ಹೋದರೆ ಹೇಗೆ? ಕನ್ನಡಿಗರ ದೌರ್ಭಾಗ್ಯ ಅ೦ದರೆ ಗೌಡರು, ರೆಡ್ಡಿಗಳು, ಯೆಡ್ಯುರಪ್ಪ, ಅನ೦ತು.... ಮತ್ತು ಪಟಾಲ೦, ಬ್ಲಾಗ್ ಮಾಡದೆ ಇರುವುದು. ಅವರೇನಾದರು ಬರೀತಾ ಇದ್ದಿದ್ದರೆ, ಕಾಮೆ೦ಟ್ ಗಳಿಗೆ, ಇನ್ನಿತರ ಅನಾಮಧೆಯ ಬ್ಲಾಗಿಗೆ ಹೆದರಿ ಸನ್ಯಾಸ ಸ್ವೀಕರಿಸುತ್ತ ಇದ್ದರೊ ಎನೊ!!!

ಕಾಮೆ೦ಟುಗಳ "ಗುಮ್ಮ" ಕ್ಕೆ ಹೆದರಿ ಬ್ಲಾಗು ಮುಚ್ಚಿರುವ ಅಥವಾ ಮುಚ್ಚುವ ತೀರ್ಮಾನ ತೆಗೆದುಕೊ೦ದಿರುವ ಬ್ಲಾಗಿಗರ ಬಗ್ಗೆ ಅಯ್ಯೋ ಅನಿಸುತ್ತದೆ. ಎಲ್ಲರೂ ಒ೦ದೇ ರೀತಿಯ ದೃಷ್ಟಿಕೋನ ಹೊ೦ದಿರುವುದಿಲ್ಲ, ಈ ಜಗದಲ್ಲಿ, ಒಳ್ಳ್ರೆಯವರು, ಕೆಟ್ಟವರು, ಕಾಲೆಳೆಯುವವರು, ಕೈಕೊಡುವವರು, ಕಳ್ಳರು, ಸುಳ್ಳರು, ಸುಭಗರು ಎಲ್ಲರೂ ಇದ್ದಾರೆ, ಈ ಬ್ಲಾಗೆ೦ಬ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಇರುವ ಮಾಧ್ಯಮದಲ್ಲಿ ತನ್ನ ಬರಹಕ್ಕೆ ಯಾವ್ಯಾವ ತರಹದ ಪ್ರತಿಕ್ರಿಯೆ ಬರಬಹುದು, ಅಥವಾ ಬರಬೇಕು ಎ೦ಬ ನಿರ್ದಿಷ್ಟ ನಿರೀಕ್ಷೆ ಇಟ್ಟುಕೊಳ್ಳಲಾಗದು. ಹಾಗೊ೦ದು ವೇಳೆ ಅ೦ತಹ ಏಕಮುಖ ಪ್ರತಿಕ್ರಿಯೆ ಬೇಕೆ೦ದಿದ್ದಲ್ಲಿ, ಸಾರ್ವಜನಿಕ ಮಾಧ್ಯಮದಲ್ಲಿ ಅ೦ದರೆ ಬ್ಲಾಗಿನಲ್ಲಿ ಬರೆಯಲೇ ಬಾರದು, ತಾವೇ ಬರೆದು, ತಾವೇ ಓದಿ ಖುಶಿಪಟ್ಟುಕೊಳ್ಳಬೇಕು. ಈಗ ನೋಡಿ ನಮ್ಮ ಭೈರಪ್ಪ, ಅನ೦ತಮೂರ್ತಿಯವರನ್ನು ಎಷ್ಟೊ೦ದು ಜನ, ಲಭ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಟೀಕಿಸುತ್ತಿಲ್ಲ (ನಾನು ಸೇರಿದ೦ತೆ), ಅವರೆ೦ದಾದರೂ ಹೆದರಿ ತಾವು ಬರೆಯುವುದನ್ನು, ಮಾತನಾಡುವುದನ್ನು ನಿಲ್ಲಿಸಿದ್ದಾರೆಯೇ ? ಪ್ರತಿಕ್ರಿಯೆಗೆ ಹೆದರಿ ಬರೆಯುವುದನ್ನ ನಿಲ್ಲಿಸುವುದೆ೦ದರೆ, ಅದು ತಮಗೆ ತಾವೇ ಮಾಡಿಕೊಳ್ಳುವ ಆತ್ಮವ೦ಚನೆ ಎ೦ದು ಅರಿಯಬೇಕು. ಯಾರೋ ಒಬ್ಬ ಮಹಾನುಭಾವ ಗಾಳಿ-ಮಳೆ-ಗುಡುಗಿಗೆ ಹೆದರಿ ರಸ್ತೆಗಿಳಿದವನೂ ಹೆದರಿ ಓಡಿ ಹೋಗಿ ಮನೆಯೊಳಗೇ ಕುಳಿತಿದ್ದನಂತೆ. ಇನ್ನು ನಾನು ಹೊರಬರುವುದಿಲ್ಲ ಎ೦ದು ಶಪಥ ಮಾಡಿ ಬಾಗಿಲು ಮುಚ್ಚಿ ಕುಳಿತಿದ್ದನಂತೆ. ಮಳೆಯಿರಲಿ, ಸಿಡಿಲು-ಗುಡುಗೆ ಇರಲಿ, ರೋಡಿಗಿಳಿದ ಮೇಲೆ ಅದನ್ನು ಎದುರಿಸುವ ಮನೋಬಲ ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಗಮ್ಯ ತಲುಪುವುದು ಸಾಧ್ಯ. ಬೇಕಾದರೆ ಛತ್ರಿ ಹಿಡಿದುಕೊಳ್ಳಿ, ಮಳೆ ಇದೆ ಅ೦ತ ಮನೆಯಿ೦ದ ಹೊರಬರಲೇ ಹೆದರಿದರೆ ಹೇಗೆ ಸ್ವಾಮಿ ?

Friday, August 14, 2009

ಬಾಣಸಿಗನ ಬವಣೆಗಳು!!!



ಭಾಗಶಃ ಎಲ್ಲಾ ಗಂಡಸರು ಒಮ್ಮೆ ಯಾದರು ಅಡುಗೆ ಮನೆಗೆ ನುಗ್ಗಿ ನಳ ಮಹಾರಾಜನ ತರ ಪೋಸ್ ಕೊಟ್ಟು ಅಡುಗೆ ಮಾಡಿರ್ತಾರೆ. (ನುಗ್ಗದೆ ಇದ್ದವರು ಇರಬಹುದು, ನಾನು ಕಂಡಿಲ್ಲ) ಇರಲಿ ನಾನಂತೂ ಇ ಪಾಕ ಗೃಹಕ್ಕೆ ಕಾಲೇಜು ದಿನಗಳಲ್ಲೇ ಕಾಲಿರಿಸಿದ್ದೆ. ಆದರೆ ಅದು ನಮ್ಮ ಮನೇಲಿ ಅಲ್ಲ ಅನ್ನೋದು ಅಷ್ಟೇ ವ್ಯತ್ಯಾಸ. ನಾನು ಅಡುಗೆ ಭಟ್ಟರ ಗ್ಯಾಂಗ್ ಕಾಲೇಜು ದಿನಗಳಲ್ಲಿ ಸೇರಿದ್ದೆ. .!! ತೀರ ಉಪ್ಪು ಕಾರ ಹಾಕೋ ಲೆವೆಲ್ ನಲ್ಲಿ ಕೆಲಸ ಮಾಡ್ತಾ ಇರಲಿಲ್ಲ ವಾದರೂ ತರಕಾರಿ ಹೆಚ್ಚೋದು, ಬಡಿಸೋದು ನಮ್ಮ ಕೆಲಸ. ಅಲ್ಲಿ ಸಿಗೋ ದುಡ್ಡು ಪಾಕೆಟ್ ಮನಿ.


ಒಮ್ಮೆ ಹೀಗೆ ಒಂದು ಗೃಹ ಪ್ರವೇಶ ಕಾರ್ಯ ಕ್ರಮಕ್ಕೆ ಹೋಗಬೇಕಾಯಿತು. ಗೃಹ ಪ್ರವೇಶ ಅದರಲ್ಲೂ ಮಲೆನಾಡಿನಲ್ಲಿ ಅಂದರೆ ಮುಗಿತು. ಅಡುಗೆ ಮಾಡೋರಿಗೆ ಸರಿಯಾದ ಜಾಗ ಇರೋಲ್ಲ, ಸಾಕಷ್ಟು ಸಂದರ್ಬ ದಲ್ಲಿ ಮನೆ ಕೆಲಸ ಕೂಡ ಪೂರ ಮುಗಿದಿರೋಲ್ಲ. ಆದರು ಅದರಲ್ಲೇ ರಾತ್ರೆ ಪೂರ ಹೋಮ ಹವನಾದಿ ಗಳು ನಡಿಬೇಕು ಹಾಗು ಅದೇ ಮನೆಯ ಹಿತ್ತಿಲಲ್ಲಿ ನಾವು ಅಡುಗೆ ಮಾಡಬೇಕು. ಸರಿ ಅವತ್ತು ಇದ್ದವರು 3 ಜನ, ಸುಮಾರು 150 ಜನಕ್ಕೆ ಮರುದಿನ ಊಟವಿತ್ತು. ಮೂವರಲ್ಲಿ ಒಬ್ಬ ನಾನು, "ಮೈನ್ ಭಟ್ಟರು", ಮತ್ತೊಬ್ಬ ಅವರ ಅವರ ಅಣ್ಣನ ಮಗ ರಘು. ರಘು ಶಿವಮೊಗ್ಗೆ ಯಲ್ಲಿ ಅಡುಗೆ ಕೆಲಸ ಮಾಡ್ತಾ ಇದ್ದ. ನಾವುಗಳು ಸಂಜೆ ನಾಲ್ಕಕ್ಕೆ ಕೆಲಸ ಶುರು ಮಾಡಿದೆವು. ಭಟ್ಟರು ಸಾರಿನ ಪುಡಿ, ಸಾಂಬಾರ್ ಪುಡಿ, ಪುಳಿಯೋಗರೆ ಗೆ ಹುರಿತಾ ಇದ್ದರು. ನಾನು ಅದನ್ನ ಒಂದು ಕೆಟ್ಟ mixer ನಲ್ಲಿ ಪುಡಿ ಮಾಡ್ತಾ ಇದ್ದೆ. (ಸಾಮನ್ಯ ವಾಗಿ ಅಡುಗೆ ಭಟ್ಟರಿಗೆ ಒಳ್ಳೆ ಮಿಕ್ಸರ್ ಕೊಡೋಲ್ಲ, ಬೇಕಾಬಿಟ್ಟಿ ತುಂಬಿ ಕೆಡಿಸ್ತಾರೆ ಅಂತ. ) ಭಟ್ಟರು ತರಾ ತುರಿ ಯಲ್ಲಿ ಹುರಿದು, ರಘು ಗೆ ನಾಳಿನ ಅಡುಗೆ ಗಳ ಬಗ್ಗೆ ವಿವರಿಸಿ ಬಾದುಶ ಮಾಡಲು ಹಿಟ್ಟು ಕಲೆಸಿ ದರು. ಆಮೇಲೆ ನಂಗೆ ಸುಮಾರು 250 ಬಾದುಶ ಮಾಡಲು, ಹಾಗು ರಘು ಗೆ ಸಿಹಿ ಬೂಂದಿ ಕಾಲು ಮಾಡಲು ಹೇಳುತ್ತಾ ಹೊರಡಲು ಅನುವಾದರು. ನಾವು ಮುಖ ಮುಖ ನೋಡುವ ಹೊತ್ತಿಗೆ, ಅವರು ಸ್ನಾನ ದ ಮನೆಗೆ ಹೋಗಿಬಿಟ್ಟಿದ್ದರು. ಆಮೇಲೆ ತಿಳಿಯಿತು... ಗೃಹ ಪ್ರವೇಶದ ಪುರೋಹಿತರು ಕೂಡ ಅವರೇ ಅಂತ. ಭಾಗಶಃ buy one get one free ಅಂತ ಘೋಷಣೆ ಮಾಡಿದ್ರೋ ಏನೋ..


ನಾನು ಅಂದು ಕೊಂಡೆ ರಘು ದೊಡ್ಡ ಅಡುಗೆ ಭಟ್ಟ, ಅವನಿಗೆ ಎಲ್ಲಾ ಬರುತ್ತೆ, ಸಧ್ಯಕ್ಕೆ ಅವನೇ ನನ್ನ ಟೀಂ ಲೀಡರ್ ಅಂತ. ನನ್ನ ಮುಂದೆ ಸುಮಾರು 250ಬಾದುಶ ಕರಿಯಲಿಕ್ಕೆ ಇತ್ತು. ನಾನು ಕಷ್ಟ ಪಟ್ಟು ಸೌದೆ ಒಲೆಲಿ ಎಣ್ಣೆ ಕಾಯಿಸಿ, ಅ ಹೊಗೆಗೆ ಕಣ್ಣು ಕೆಂಪಾಗಿಸಿ ಕೊಂಡು ಕಾರ್ಯೋನ್ಮುಕ ನಾದೆ. ರಘು ತರಕಾರಿ ಹೆಚ್ಚಲನುವಾದ. ಸುಮಾರು ರಾತ್ರೆ 12 ರ ಹೊತ್ತಿಗೆ ನಮ್ಮ ಕೆಲಸಗಳು ಮುಗಿಯಿತು. ಇನ್ನು ಬೂಂದಿ ಕಾಳು ಮಾಡೋದು ಒಂದೇ ಬಾಕಿ ಇತ್ತು. ರಘು ಗೆ ಅದನ್ನು ಮಾಡಲು ಹೇಳಿದೆ, ಎಣ್ಣೆ ಬಿಸಿ ಇರೋದ್ರಿಂದ 10 ನಿಮ್ಷ ದಲ್ಲಿ ಕೆಲಸ ಮುಗಿಸಿ ಮಲಗ ಬಹುದು ಅಂತ. ರಘು ಗೆ ಒಮ್ಮೆಲೇ ಆಶ್ಚರ್ಯ, ನೀನೆ ಮಾಡು, ನಾನು ಯಾವತ್ತು ಬೂಂದಿ ಕಾಳು ಇರಲಿ, ಹಪ್ಪಳ ಕೂಡ ಕರಿದು ಗೊತ್ತಿಲ್ಲ ಅಂದ. ಅವನ ಕಣ್ಣಿಗೆ ನಾನು ನಳ ಮಹಾರಾಜನೋ, ಭೀಮನೂ.. ಏನೋ. ಅ ಸಮಯ ಹೆಂಗಿತ್ತು ಅಂದರೆ ಅನಕ್ಷರಸ್ತರು IAS ಬರೀಲಿಕ್ಕೆ ಹೋದಂಗೆ ಇತ್ತು. ನಮ್ಮ ಸಮಸ್ಯೆ ಬೂಂದಿ ಕಾಳು ಮಾತ್ರ ಆಗಿರಲಿಲ್ಲ, ನಾಳೆ 150 ಜನಕ್ಕೆ ಹೇಗೆ ಅಡುಗೆ ಮಾಡೋದು, ಎಷ್ಟು ಅನ್ನ, ಸಂಬಾರ ಮಾಡಬೇಕು? ಇಬ್ಬರ ಸ್ಥಿತಿ ಕರೆಂಟ್ ಹೊಡೆದ ಕಾಗೆ ತರ ಆಗಿತ್ತು.


ಭಟ್ಟರು ರಘು ಗೆ ಎಲ್ಲ ಅಡುಗೆ ಮಾಡೋಕೆ ಬರುತ್ತೆ ಅಂತ ತಿಳಿದಿದ್ದರು ಅನ್ಸುತ್ತೆ. ಅದೂ ಅಲ್ಲದೆ ಅವನು ಇದ್ದಿದ್ದು ಶಿವಮೊಗ್ಗ ದಂತ ಪೇಟೆ ಲಿ, ಅವರು ಅವನ ಬಗ್ಗೆ ಹಾಗೆ ತಿಳಿದಿದ್ದು ತಪ್ಪೇನು ಇರಲಿಲ್ಲ. ಸರಿ ಇಬ್ಬರು ಸೇರಿ ಬೂಂದಿ ಮಾಡಲು ಹಿಟ್ಟು ಕಲೆಸಿ, ಕರಿಯಲು ಶುರು ಮಾಡಿದೆವು. ಆದರೆ ಮೊದಲ ಹೆಜ್ಜೆ ನೆ ತಪ್ಪು. ನಮಗೆ ಅದನ್ನ ಹೆಂಗೆ ಮಾಡೋದು ಗೊತ್ತಿಲ್ಲ. (ಬೂ೦ದಿಕಾಳಿಗೆ ಸ್ವಲ್ಪ ದೊಡ್ಡ ಬೂಂದಿ ಬೇಕು, ಲಾಡಿನ ಉಂಡೆ ಮಾಡಲು ಚಿಕ್ಕ ಕಾಳುಗಳು ಬೇಕು) ಕರಿದೆವು.. ಅದು ಪೂರ ಚಿಕ್ಕ ಚಿಕ್ಕ ಕಾಳುಗಳು ಆಗಿತ್ತು. ಅದನ್ನ ಬಡಿಸಲು ಸಾಧ್ಯವೇ ಇರಲಿಲ್ಲ. ನಾಳೆಗೆ ಸಿಹಿ ಬೂಂದಿ ಬೇಕೇ ಬೇಕು. ಸಮಯ ಬೇರೆ ಮೀರುತ್ತಾ ಇತ್ತು. ರಘು ಒಂದು ಬೀಡಿ ಹಚ್ಚಿ ಕೂತ. ಸ್ವಲ್ಪ ಹೊತ್ತಿನ ನಂತರ ನಾವು ಲಾಡಿನ ಉಂಡೆ ಮಾಡೋಣ ಎಂದ. ಬೀಡೀಲಿ ಐಡಿಯಾ ಗಳನ್ನೂ ಹಿಡಿಯೋ ಅಂಟೆನಾ ಏನಾದ್ರು ಇತ್ತ ಅಂತ. ಅಂತು ಮಧ್ಯ ರಾತ್ರೆ ಸಕ್ಕರೆ ಪಾಕ ಮಾಡಲು ಕುಳಿತೆವು. ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿದೆವು. ದುರದೃಷ್ಟಕ್ಕೆ ಪಾಕ ನೀರಾಗಿತ್ತು, ಉಂಡೆ ಮಾಡುವ ಹಾಗೆ ಇರಲಿಲ್ಲ. ಅಷ್ಟು ಕಡಲೆ ಹಿಟ್ಟು, ಸಕ್ಕರೆ.. ಎಲ್ಲಾ ವೇಸ್ಟ್ ಆಗುತ್ತಲ್ಲ ಅಂತ ಬೇಜಾರು... ರಘು ಮತ್ತೆ ಒಂದು ಬೀಡಿ ಗೆ ಮೊರೆ ಹೋದ. ಬೀಡಿ ಇಂದ ಐಡಿಯಾ ಬೇಗನೆ ಅವನಿಗೆ ಬಂತು, ಸ್ವಲ್ಪ ಏರಿದ ಪಾಕ ಮಾಡಿ ಹಾಕಿದರೆ ಸರಿ ಆಗುತ್ತೆ ಅಂದ. ಕೈಯಲ್ಲಿ ಬೀಡಿ ಇಟ್ಟುಕೊಂಡು ಪಾಕ ಮಾಡೋಕೆ ಶುರು ಮಾಡಿದ, . ನಾನು ಅವನ ಬೀಡಿ ಯಾರಿಗೂ ಗೊತ್ತಾಗದೆ ಇರಲಿ ಅಂತ ಹಿತ್ತಿಲನ್ನ ಹೊಗೆ ಮಾಡಿ ಬಿಟ್ಟೆ. (ಇದ್ದಕ್ಕಿದ್ದಂತೆ ಅಡುಗೆ ಮನೆ ಇಂದ ಹೊಗೆ ಬರ್ತಾ ಇದೆ ಅಂದ್ರೆ, ಏನೋ ಕಿತಾ ಪತಿ ನಡೀತಾ ಇದೆ ಅಂತ ಅರ್ಥ.. ). ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿ ದೇವು. ಸ್ವಲ್ಪ ಅದೃಷ್ಟ ಅನ್ಸುತ್ತೆ, ಉಂಡೆ ಮಾಡಲು ಬಂತು. ಒಂದಷ್ಟು ದೊಡ್ಡ , ಒಂದಷ್ಟು ಚಿಕ್ಕ.. ಅನನುಬವಿ ಗಳು. ಅಂತು 150 ಲಾಡು ಕಟ್ಟಿ ಮಲಗಲು ತಯಾರಾದೆವು.


ಆದರೆ ನಿದ್ದೆ ಎಲ್ಲಿಂದ ಬಂದೀತು? ಮಾರನೆಯ ದಿನಕ್ಕೆ ಎಲ್ಲಾ ತಯಾರು ಮಾಡಬೇಕು, ಅದೇ ಯೋಚನೆ. ಕಣ್ಣು ಮುಚ್ಚಿದರೆ ಹೊಗೆಯ ಪ್ರಭಾವ, ಸಿಕ್ಕಾಪಟ್ಟೆ ಉರಿ. ಅಂತು ಬೆಳಿಗ್ಗೆ 5 ಕೆ ಎದ್ದು ಸ್ನಾನ ಮಾಡಿ ಹಾಲು ಕಾಯಿಸಿ, 2 ಕಪ್ ಕಾಫಿ ಕುಡಿದು ಕೆಲಸ ಶುರು ಮಾಡಿದೆವು. ಬೀಳೆ ಬೇಯಲು, ತರಕಾರಿ ಬೇಯಿಸಲು ಹಾಕಿದೆವು. ಎಷ್ಟು ಸಾರು, ಸಾಂಬಾರು, ಪಾಯಸ ಬೇಕು ಅಂತ ಗೊತ್ತಿಲ್ಲ. ಸುಮ್ಮನೆ ಒಂದು ಅಂದಾಜಿಗೆ ಹಾಕಿದೆವು. ಸಾರು ಮುಂತಾದವು ಟ್ರಯಲ್ ಅಂದ ಎರರ್ ಮೆಥಡ್. ಸ್ವಲ್ಪ ಕುಡಿದು ನೋಡೋದು, ಉಪ್ಪು ಕಡಿಮೆ ಇದ್ರೆ ಉಪ್ಪು ಸೇರಿಸೋದು, ಮತ್ತೆ ಟೇಸ್ಟ್ ಮಾಡೋದು. ಹೀಗೆ ನಡೀತು. ಅಂತು 12 ರ ಸುಮಾರಿಗೆ ಎಲ್ಲಾ ಕೆಲಸ ಮುಗೀತು. ಸ್ವಲ್ಪ ಹೊತ್ತಲ್ಲಿ ಊಟದ ಕಾರ್ಯಕ್ರಮ ಶುರು ಆಯಿತು. ಮಲೆನಾಡಲ್ಲಿ ಬಡಿಸಲಿಕ್ಕೆ ವಾಲಂಟೀರ್ ಗಳು ತುಂಬಾ ಇರೋದ್ರಿಂದ ಅವರೇ ಬಡಿಸ್ತಾರೆ. ನಮ್ಮದೇನಿದ್ದರೂ ಅಡುಗೆ ಮಾತ್ರ. ಸ್ವಲ್ಪ ಜನರ ಊಟ ಆಗ್ತಾ ಇದ್ದ ಹಾಗೆ ಸಾಂಬಾರು ಖಾಲಿ!! ಆಲೂಗಡ್ಡೆ ಬೀನ್ಸ್ ಹುಳಿ ಮುಗಿದೇ ಹೋಯಿತು. ಟೊಮೇಟೊ ಸಾರು ಮಾತ್ರ ಸಿಕ್ಕಾಪಟ್ಟೆ ಇದೆ. ಏನು ಮಾಡೋದು? ರಘು ಮತ್ತೆ ಬೀಡಿ ಗೆ ಶರಣಾದ. 2 ನಿಮಿಷ ದ ನಂತರ ಒಂದು ಬರೋಬ್ಬರಿ ಐಡಿಯಾ ಜೊತೆ ಬಂದ. ಜಾಸ್ತಿ ಇದ್ದ ತೊಂಡೆ ಕಾಯಿ ಪಲ್ಯ, ಟೊಮೇಟೊ ಸಾರು ಎರಡು ಮಿಕ್ಸ್!!! ಇನ್ಸ್ಟಂಟ್ ಸಾಂಬಾರು ರೆಡಿ!! ಒಂದು ಸಮಸ್ಯೆ ಮುಗೀತು ಅಂದ್ರೆ ಮತ್ತೊಂದು, ಪಾಯಸ ಖಾಲಿ, ಏನು ಮಾಡೋದು, ರಘು ಗೆ ಬೀಡಿ ಲೂ ಐಡಿಯಾ ಖಾಲಿ. 5 ನಿಮಿಷ ದಲ್ಲಿ ಪಾಯಸ ಬೇಕು. ನಂಗೆ ತಲೆ ಕೆಡುತ್ತಾ ಇತ್ತು. ಅನ್ನ ಬಸಿದಿದ್ದ , ಗಂಜಿ ತೆಗೆದು ಶಾವಿಗೆ ಪಾಯಸಕ್ಕೆ ಹಾಕಿದೆ, ಅರ್ದ ಲೀಟರ್ ಹಾಲು, ಒಂದು ಕೆಜಿ ಸಕ್ಕರೆ ಹಾಕಿದೆ. ರಘು ಒಂದಿಷ್ಟು ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ ಎಲ್ಲಾ ಹಾಕಿ ಸುವಾಸನೆ ಮಾಡಿಬಿಟ್ಟ. ಎರಡೇ ನಿಮಿಷ ದಲ್ಲಿ ಘಮ ಘಮ ಪಾಯಸ ರೆಡಿ!!


ಅಂತು ಕೊನೆಗೆ ಊಟದ ಕಾರ್ಯ ಕ್ರಮ ಮುಗಿತು. ನಮಗೆ ಭಟ್ಟರು ಎಲ್ಲಿ ಬಂದು ಉಗಿತಾರೋ ಅನ್ನೋ ಭಯ. ರಘು ಗೆ ಚಿಕ್ಕಪ್ಪ ನ ಕಂಡು ಸ್ವಲ್ಪ ಹೆದರಿಕೆ. ಭಟ್ಟರ ಬಳಿ ದುಡ್ಡನ್ನ ಇನ್ನೊಮ್ಮೆ ತಗೋಬಹುದು ಅಂತ ಮನೆಗೆ ಹೊರಟು ಬಿಟ್ಟೆ. ರಘು ನು ಅರ್ಜೆಂಟ್ ಅಂತ ಶಿವಮೊಗ್ಗೆ ಗೆ ಹೊರಟ. ಸುಮಾರು 15-20 ದಿನ ಆದ ಮೇಲೆ ಸಂತೇಲಿ ಸಿಕ್ಕ ಭಟ್ಟರು ಅವತ್ತು ಹಂಗೆ ಓದಿ ಬಿಟ್ಯಲ್ಲೋ ಶಾಸ್ತ್ರೀ, ತಗೋ ಅಂತ 200 ರುಪಾಯಿ ಕೊಟ್ಟರು. ಭಾಗಶ್ಯಃ ಅವತ್ತು ನಮ್ ಅಡುಗೆ ತಿಂದು ಯಾರ ಆರೋಗ್ಯ ನು ಕೆಟ್ಟಿರಲಿಲ್ಲ ಅನ್ಸುತ್ತೆ.


ಇ ಪ್ರಸಂಗ ಆದಮೇಲೆ ನಾನು ಯಾವತ್ತು ಪ್ರಯೋಗ ಮಾಡಲಿಕ್ಕೆ ಹೋಗಲಿಲ್ಲ. ಇತ್ತೀಚಿಗೆ ಮಾಡೋ ಸಣ್ಣ ಪುಟ್ಟ ಪ್ರಯೋಗ ಗಳು ನಂ ರೂಂ ಮೆಟ್ ವರುಣ ನ ಮೇಲೆ ಮಾತ್ರ!. ಪಾಪ ಅವನು ನಾನು ಎಂತ ಕರಾಬು ಅಡುಗೆ ಮಾಡಿದ್ರು ನಂಗೆ ಗೊತ್ತಾಗೋ ಹಾಗೆ ಬೈದು ಕೊಳ್ಳಲ್ಲ.




ಇಷ್ಟೆಲ್ಲಾ ವಿಷ್ಯ ಯಾಕೆ ನೆನಪಿಗೆ ಬಂತು ಅಂದ್ರೆ, ರೆಸೆಶನ್!! ಕೈಯಲ್ಲಿ ಇರೋ ಕೆಲಸ ಹೋದ್ರೆ ವಾಪಾಸ್ ಕೈಯಲ್ಲಿ ಸೌಟು ಹಿಡಿಯೋ ಪ್ಲಾನ್ ಇದೆ!! ನಿಮ್ಮಗಳ ಮನೇಲಿ ಏನಾದ್ರು ಕಾರ್ಯಕ್ರಮ ಇದ್ದರೆ ದಯವಿಟ್ಟು ಅಡುಗೆ ಕಂಟ್ರಾಕ್ಟ್ ನ ನಂಗೆ ಕೊಡಬೇಕಾಗಿ ವಿನಂತಿ.

ವಿ ಸೂ : ಶೀರ್ಷಿಕೆಯನ್ನ ಪರಾಂಜಪೆ ಅವರಿಂದ ಕಡ ತಂದದ್ದು.

Friday, August 7, 2009

ಯಮಪುರಿಯಲ್ಲಿ ರಾಜಕೀಯ!!!!


ಒಂದು ಕಥೆ ಹೆಂಗೆ ಶುರು ಆಗಬೇಕು? ನಾನು ಚಿಕ್ಕವನಿದ್ದಾಗ ಕೇಳುತ್ತಿದ್ದ ಕಥೆಗಳೆಲ್ಲವೂ "ಒಂದಾನೊಂದು ಕಾಲದಲ್ಲಿ.." ಅಂತಲೇ ಶುರು ಆಗುತ್ತಾ ಇದ್ದುವು. ಈಗೆಲ್ಲ ಕಥೆ ಮಧ್ಯದಿಂದ ಶುರು ಆಗುತ್ತವೆ, ಕೊನೇಲಿ ಒಂದು ಪಂಚ್, ಅರ್ಥವಾಗದ ಒಂದು ಕ್ಲೈಮಾಕ್ಸ್. ಹೋಗಲಿ ಬಿಡಿ, ನಾನು ಜಾಸ್ತಿ ಕಥೆಗಳನ್ನು ಓದಿಲ್ಲ, ಓದಿದರಲ್ಲಿ ಅರ್ಥವಾಗಿದ್ದು ಕೂಡ ಸ್ವಲ್ಪ ಕಡಿಮೆ ನೆ. (ನನ್ನ ಕವನ ಗಳ ಮೇಲಿನ ಜ್ಞಾನಕ್ಕೆ ಹೋಲಿಸಿದರೆ, ಕಥೆ, ಕಾದಂಬರಿ ಗಳಲ್ಲಿ ನಾನು RANK. ) ಇರಲಿ ಇಗ ನಿಮಗೊಂದು ಕಥೆ ಹೇಳಲಿದ್ದೇನೆ, ಇದು ನಾನು ಮಾಡಿದ ಅಡುಗೆ ಇದ್ದಂತೆ, ಒಂದಿಷ್ಟು ಸಾಂಬಾರ ಪದಾರ್ಥ ಮರೆತಿದೆ, ಒಂದಿಷ್ಟು ಉಪಯೋಗಿಸುವುದು ಹೇಗೆಂದು ತಿಳಿಯದೆ ಹಾಗೆ ಕುಳಿತಿವೆ. ಆದರೂ ಇದು ಆಜೀರ್ಣ ವಾಗಲಾರದು ಅನ್ನೋ ಆಸೆ.

------------------------------------------------------------------





ಒಂದಾನೊಂದು ಕಾಲದಲ್ಲಿ ನರಕಾದಿಪತಿ ಯಮನು ತನ್ನ ಸಾಮ್ರಾಜ್ಯವನ್ನು ಅತ್ಯಂತ ಯಶಸ್ವಿ ಯಾಗಿ ಆಡಳಿತ ನಡೆಸಿಕೊಂಡು ಬರುತ್ತಾ ಲಿದ್ದನು. ಬ್ರಹ್ಮನು ಯಾರ ಹಣೆಯ ಮೇಲೆ ಎಷ್ಟು ಆಯಸ್ಸು ಬರೆದಿದ್ದಾನೆ ಎಂಬುದನ್ನು ನೋಡಿ, ಅವರನ್ನು ಆಸ್ಥಾನಕ್ಕೆ ಹಿಡಿ ತಂದು, ಅವರು ಭೂಲೋಕದಲ್ಲಿ ಮಾಡಿದ ಪಾಪ ಕಾರ್ಯಗಳ ಬಗ್ಗೆ ಚಿತ್ರಗುಪ್ತಾದಿ ಗಳೊಡನೆ ಸಮಾಲೋಚಿಸಿ, ಶಿಕ್ಷೆ ಅಥವಾ ಸ್ವರ್ಗಕ್ಕೆ ಕಳುಹಿಸುತ್ತಾ ಇದ್ದನು. ಅಲ್ಲಿನ ಕಾರ್ಮಿಕರಾದ ಯಮ ಕಿಂಕರರು ಭೂಮಂಡಲ ವೆಲ್ಲಾ ಅಲೆದಾಡಿ ಯಮ ಪಾಶದಿಂದ ಆತ್ಮ ವನ್ನು ಹೊತ್ತೊಯ್ಯುತ್ತಾ ಇದ್ದರು. ಅಲ್ಲಿನ ಎಲ್ಲರೂ 24/7 , ಇಂದಿನ ಕಾಲ್ ಸೆಂಟರ್ ನು ನಾಚಿಸುವಂತೆ ಕೆಲಸ ಮಾಡುತ್ತಾ ಇದ್ದರು.


ಇಂತಿಪ್ಪ ನರಕಕ್ಕೆ ಒಮ್ಮೆ ಭಾರತ ದಿಂದ ಒಬ್ಬ ಯುವ ರಾಜಕಾರಣಿಯ ಆತ್ಮ ವನ್ನು ಹಿಡಿದು ತರಲಾಯಿತು.
ಎಂದಿನಂತೆ ಯಮನ ಎದುರು ವಿಚಾರಣೆ ಯು ಶುರು ಆಯಿತು. ಚಿತ್ರ ಗುಪ್ತನು ತನ್ನ ಪುಸ್ತಕವನ್ನು ನಾಲ್ಕಾರು ಬಾರಿ ಜಾಲಾಡಿದರು ಒಂದೇ ಒಂದು ಪುಣ್ಯ ಕೆಲಸ ಕಾಣಿಸದೆ, ಘನ ಘೋರ ಅಕೃತ್ಯ ಗಳೇ ಕಂಡವು. ಪಾಪ ಕಾರ್ಯವನ್ನು ಎಂದು ಸಹಿಸದ ಯಮನು ಶಿಕ್ಷೆಯ ಬಗ್ಗೆ ಯೋಚಿಸಲರಂಬಿಸಿದನು.


ಇತ್ತ ಇದೆ ಸಮಯದಲ್ಲಿ ಭಾರತದಲ್ಲಿ ರಾಜಕಾರಣಿಯ ಸಾವಿಗೆ ಸಂತಾಪ ಸೂಚಕವಾಗಿ ಒಂದು ವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸ ಲಾಯಿತು. ಆದರೆ ರಾಜಕಾರಣಿಯ ಮನೆಯಲ್ಲಿ, ಆತನ ಆಪ್ತ ಬೆಂಬಲಿಗರಲ್ಲಿ ಒಂದು ಸಮಸ್ಯೆ ತಲೆದೋರಿತು. ರಾಜಕಾರಣಿಯ ಅಪ್ಪ, ಅಮ್ಮ ಒಂದೊಂದು ಧರ್ಮೀಯರು. ತಾನು ಜಾತ್ಯಾತೀತ ಎಂದು, ಮುಂದಿನ ಜನ್ಮದಲ್ಲಿ ಮತ್ತೊಂದು ದರ್ಮದಲ್ಲಿ ಹುಟ್ಟುವೆ ಎಂದು ಹೇಳಿಕೊಳ್ಳುತ್ತಲಿದ್ದನು. ಹಾಗಾಗಿ ಶವ ಸಂಸ್ಕಾರದ ಬಗ್ಗೆ ದಿಲ್ಲಿಯಲ್ಲಿ ಬಹು ದೊಡ್ಡ ಸಭೆ ನಡೆಯಿತು. ಹೂಳುವುದೋ, ಸುಡುವುದೋ ತಿಳಿಯದೆ.. ಕೊನೆಗೆ ಟಿ ವಿ ಯಲ್ಲಿ ನೇರ ಪ್ರದರ್ಶನಕ್ಕೆ ಶವ ವನ್ನು ಧಹಿಸುವುದೇ ಸೂಕ್ತವೆಂದು ವಿದೇಶಿ ಮಾದ್ಯಮಗಳು ಹೇಳಿದ್ದರಿಂದ ನಗರ ಮದ್ಯೆ ಸುಡಲಾಯಿತು. ಹೈಕಮಾಂಡಿನ ಪ್ರೀತಿ ಗಿಟ್ಟಿಸಲು ಕೆಲವರು ಸತ್ತ ರಾಜಕಾರಣಿಗೆ ಸ್ವರ್ಗ ಸಿಗಲೆಂದು ಹೋಮ ಹವನಾದಿಗಳನ್ನು ಮಾಡಿದರು, ಇನ್ನು ಕೆಲವರು ಜಂಟಿ ಪ್ರಾರ್ಥನೆ ಯನ್ನು ಮಾಡಿದರು. ಆದರೆ ಇವಾವು ಯಮನ ಮೇಲೆ ಪ್ರಭಾವ ಬೀರಲು ವಿಫಲ ವಾಗಿ ರಾಜಕಾರಣಿಗೆ ನರಕ ದ ಶಿಕ್ಷೆ ಕಾಯಂ ಆಯಿತು.


ಇವನು ತೀರ ಮಾಹತ್ವಾಕಾಂಕ್ಷೆ ಹೊಂದಿದ್ದ ರಾಜಕಾರಣಿ, ಬದುಕಿನಲ್ಲಿ ಹಲವು ಸಹಸ್ರ ಲಕ್ಷ ಕೋಟಿ ಹಣ ಮಾಡಬೇಕೆಂದು ಆಸೆ ಪಟ್ಟಿ ದನು. ಇಡಿ ಭಾರತದಲ್ಲಿ ತನ್ನ ಆಳ್ವಿಕೆಯನ್ನು ವಿಸ್ತರಿಸಿ, ಅಲೆಕ್ಸಾಂಡರ ತರ ತನ್ನ ಹೆಸರು ಮಕ್ಕಳ ಶಾಲಾ ಇತಿಹಾಸದ ಪುಸ್ತಕದಲ್ಲಿ ಚಿರಾಯು ಇರಬೇಕೆಂದು ಕನಸು ಕಂಡಿದ್ದನು. ಅದೂ ಅಲ್ಲದೆ ಸಾಯುವಾಗ ಇದ್ದದ್ದು ಒಬ್ಬಳೇ ಒಬ್ಬಳು ಹೆಂಡತಿ. ಸಾಧಿಸುವ ಅವಕಾಶವಿದ್ದಾಗ, ಕನಸು ನನಸಾಗುವ ಸಮಯದಲ್ಲಿ ತನ್ನನ್ನು ನರಕಕ್ಕೆ ತಳ್ಳಿದ ಯಮನ ಮೇಲೆ ನಖಶಿಖಾಂತ ಕೋಪವು ಬಂದಿತು. ಇದಕ್ಕೆ ತಕ್ಕ ಪ್ರತಿಕಾರ ತೆಗೆದು ಕೊಳ್ಳಲೆ ಬೇಕೆಂದು ತೀರ್ಮಾನಿಸಿ, ನರಕದಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದ, ತನ್ನ ಪಕ್ಷದ ಕಾರ್ಯ ಕರ್ತರನ್ನು ಗುರುತಿಸಿದನು. ಅವರಿಗೆಲ್ಲ ಸ್ವರ್ಗದ ಆಸೆ ತೋರಿಸಿ ಒಗ್ಗುಡಿಸಿದನು. ಸ್ವರ್ಗದಲ್ಲಿ ಇರಬಹುದಾದ ಗಣಿಕೆಯರ ಬಗ್ಗೆ ವಿವರಿಸಿದಾಗ ಆತ್ಮ ಗಳು ಜಾತಿ ಬೇದ, ಮತ ದರ್ಮ ಮರೆತು ಜಾತ್ಯ ತೀತ ಆದವು. ಕೆಸರು ಹಾಗು ಮಣ್ಣಿನ ಪಕ್ಷವು ಕೈ ಜೋಡಿಸಿದವು ಹುಡುಗಿ ಅಂದರೆ ಮಂದಿ, ಜಾತಿ ಗೀತಿ ಚಿಂದಿ ಎನ್ನುವ ಸಿಲ್ಕ್ ಸ್ಮಿತಾ ಕುಣಿತದ ಹಾಡು ಅಲ್ಲಿ ಸತ್ಯ ವಾಯಿತು.


ಸಂಘಟನೆಯ ರೂಪ ಬಂದ ಕೂಡಲೇ ಅವರೆಲ್ಲ ತಡ ಮಾಡದೆ ಯಮ ನ ವಿರುದ್ದ ದಂಗೆ ಎದ್ದರು. ಮೂಲಭೂತ ಸೌಕರ್ಯ ಕೊರತೆಯನ್ನ ಅಸ್ತ್ರ ಮಾಡಿಕೊಂಡರು. ಸ್ವರ್ಗ ಇಸ್ ಶೈನಿಂಗ್, ಇಲ್ಲಿ ಗರೀಬಿ ಓಡಿಸಿ ಅಂತ ಕೂಗಾಡಿದರು. ನರಕದಲ್ಲೆಲ್ಲ ಕೋಲಹಲವೆಬ್ಬಿತು, ರಂಬೆಯ ಕನಸಿನಲ್ಲಿದ್ದ ಕೆಲವರು ತೀವ್ರ ಗಾಮಿಗಳಾದರು, ಒಟ್ಟಿನಲ್ಲಿ ನರಕ ಶಾಂತಿ ಇಲ್ಲದ ಕಾಶ್ಮೀರ ತರ ಆಯಿತು. ಇದರಿಂದ ಭ್ರಮ ನಿರಸನ ಗೊಂಡ ಯಮನು ಚಿತ್ರಗುಪ್ತರು ಮೊದಲಾದವರೊಡನೆ ಸಮಾಲೋಚನೆ ನಡೆಸಿ, ಇದಕ್ಕೆಲ್ಲ ಅ ಹೊಸ ರಾಜಕಾರಣಿಯ ಕೈಗೂಡದ ಮಹತ್ವ ಕಾಂಕ್ಷೆ ಗಳೇ ಕಾರಣವೆಂದು ತೀರ್ಮಾನಿಸಲಾಯಿತು. ಆದರೆ ಅ ರಾಜಕಾರಣಿಯನ್ನು ಮತ್ತೆ ಭೂಮಿಗೆ ಕಳಿಸುವುದು ಸಾಧ್ಯವಿಲ್ಲದಿದ್ದರಿಂದ, ಹಾಗು ಮತ್ತೊಂದು ಯಮನಿಗೆ ಮತ್ತೊಂದು ಸೋಲು ಬೇಕಿಲ್ಲ ವಾದ್ದರಿಂದ ಆತನ ವಿರುದ್ದ ಇದ್ದ ಎಲ್ಲಾ ಆರೋಪ ಗಳನ್ನೂ ಖುಲಾಸೆ ಮಾಡಿ ಸ್ವರ್ಗಕ್ಕೆ ಕಳುಸಿಹಲಾಯಿತು. ಭೂಲೋಕದಲ್ಲೂ ಇ ತರದ ನೀರಸೆ ಅನುಭವಿಸಿದ್ದ ಹೋರಾಟಗಾರರು (ಕಾರ್ಯಕರ್ತರು) ಸುಮ್ಮನೆ ಕುದಿಯುವ ಎಣ್ಣೆಯ ಬಾಣಲೆಗೆ ಹಾರಲಾರಂಬಿಸಿದರು.


ಇ ಎಲ್ಲ ಘಟನೆಯ ನಂತರ ಯಮನು ತನ್ನ ಕಾರ್ಯ ವೈಕರಿಯನ್ನು ಬದಲಿಸಿ ಕೊಂಡನು. ರಾಜಕಾರಣಿಗಳು ತೀರ ಮುದುಕ ರಾಗದ ಹೊರತು ಸಾಯುವುದು ಸಾದುವಲ್ಲವೆಂದು ಬ್ರಹ್ಮನ ಬಳಿ ವಾದಿಸಿ ಅದನ್ನು ಕಾರ್ಯರೂಪಕ್ಕೂ ತಂದನು.



ಅದಕ್ಕೆ ಅಂತೆ ನಮ್ಮ ರಾಜಕಾರಣಿಗಳ ಪಾಪ ಕಾರ್ಯವು ಗಣಿ ಲಾರಿ, ಟ್ರಕ್ಕು ಗಳಲ್ಲಿ ಲೋಡ್ ಗಟ್ಟಲೆ ತುಂಬಿದ್ದರೂ ಯಾರೂ ಸಾಯುತ್ತಾ ಇಲ್ಲವಂತೆ.