Thursday, May 28, 2009

ಭರತ ದೇಶದ ಚುನಾವಣಾ ಕಥೆಯು

ಕಲಿಯುಗದ 2065 ವಿರೋಧಿ ನಾಮ ಸಂವತ್ಸರ ದಲ್ಲಿ ಭರತ ಭೂಖ೦ಡದಲ್ಲಿ ಮಹಾ ಚುನಾವಣೆ ಯೊಂದು ನಡೆಯಿತಂತೆ. ಭೂದೇವಿಯಿ೦ದ ನೇರ ನೇಮಕಾತಿ ಆಗಿದ್ದ, ಅರ್ಥಾತ್ ಮಣ್ಣಿನ ಮಗ ನ ಬಳಗವು 33 ಕೊಟಿ ದೇವತೆ ಗಳನ್ನು ಬಗೆ ಬಗೆಯಾಗಿ ಆರಾಧಿಸುತ್ತಾ ವಿಜಯಲಕ್ಷ್ಮಿಯ ಕೈ ಪಿಡಿದು, ಭರತ ರಾಜ ನ ಕುರ್ಚಿಯನ್ನೆರಲು ಇನ್ನಿಲ್ಲದ ಕಸರತ್ತು ಗಳನ್ನು ಮಾಡುತ್ತಿದ್ದನಂತೆ.



ಆಳುವ ಪಕ್ಷಕ್ಕು, ತೆಗಳುವ ಪಕ್ಷಕ್ಕು ಯುದ್ದ ಗೆಲ್ಲುವ ನಂಬಿಕೆ ಇಲ್ಲವಾದ್ದರಿಂದ ಸನ್ ಆಫ್ ಸಾಯಿಲ್ ನು ಮಧ್ಯ ರಾಜ್ಯದ ಮಾಯಾಂಗನೆ ಯನ್ನು, ಪಶ್ಚಿಮದ ಕ್ಯಾರೆಟ್ಟು ಮತ್ತು "ವೃ೦ದಾ" ವನ ವನ್ನು ಹೆಗಲಿಗೇರಿಸಿ ಸೇನೆಯನ್ನು ಅಣಿಗೊಳಿಸಿದನಂತೆ. ಮಹಾ ಸಜ್ಜನನೂ , ಪ್ರಾಮಾಣಿಕನು, ದೇಶ ಭಕ್ತನು ಆದ ಅವನು ತನ್ನ ಇಡೀ ಪರಿವಾರವನ್ನೇ ಭರತ ಭೂಖ೦ಡಕ್ಕೆ ಮೀಸಲಿಟ್ಟಿದ್ದ ನಂತೆ.



ತನ್ನ ಕೊನೆಯ ಚುನಾವಣೆಯೆಂದು ಘೋಷಿಸಿ, ಕೈಲಾದಷ್ಟು ದಿನ ಮಣ್ಣಿನ ಸೇವೆ ಮಾಡಿ, ತಾಯಿಯ ಋಣ ತೀರಿಸಲು ಪ್ರಯತ್ನ ಪಡುವುದಾಗಿ ಘೊಷಿಸಿದ್ದ ಮಣ್ಣಿನ ಮಗನು, ಚುನಾವಣೆ ಗೆಲ್ಲಲು ಹಣೆಯ ಮೇಲೆ ಬರೆಯ ಬಹುದಾದಂತ ಪೆನ್ನು ಪಿಡಿದಿರುವ ಭ್ರಹ್ಮ ನ ತಪ್ಪಸ್ಸು ಆರಂಬಿಸಿದನಂತೆ, ದೈವ ವನ್ನು ಸಂತೃಪ್ತಿಗೊಳಿಸಲು ಕುರಿ, ಟಗರು ಮುಂತಾದ ಆಹಾರ ಪದಾರ್ಥ ಗಳನ್ನು ಕೊಟ್ಟು, ಅವನಿಗೆ ಚಿಕನ್ 65 ರುಚಿ ತೋರಿಸಿ, ಜೊತೆಗೊಂದು ರಾಗಿ ಮುದ್ದೆ ಯನ್ನು ಇತ್ತು ನೈವೇದ್ಯ ಮಾಡಿದನಂತೆ. ನಂತರ ಥೇಟ್ ಕನ್ನಡ ಸಿನೆಮಾ ದ ತರ ಚಿತ್ರ ನಟಿಯಿ೦ದ ಒಂದು ಐಟಮ್ ಸಾಂಗು ಮಾಡಿಸಿ, ಸಂಗೀತ-ನಾಟ್ಯಂ ಸಮರ್ಪಯಾಮಿ ಅಂದನಂತೆ. ಆಶರೀರ ವಾಣಿಯೊಂದು ತಥಾಸ್ತು ಎಂದು ಮೊಳಗಿಯೂ ಬಿಟ್ಟಿತಂತೆ.



ಇತ್ತ ತೆಗಳೋ ಪಕ್ಷದವರು ಮಲೆನಾಡಿನಲ್ಲಿ ಹೋಮ ಹವನ ಮಾಡಿ, ದೇವರಿಗೆ ಪೂಸಿ ಹೊಡೆಯಲು ಪ್ರಯತ್ನಿಸಿದರ೦ತೆ. ಮತದಾರ ಪ್ರಭುಗಳಿಗೆ, ಕೈಗೆ ಬಳೆ, ಉಡಲು ಸೀರೆ ಕೊಟ್ಟು ಮತ ಯಾಚನೆ ಮಾಡಿಠಂತೆ. ಆದರೆ ಅಳುವ ಪಕ್ಷ ಮಾತ್ರ ಜನರ ಕಿವಿಗೆ ಚಂದ ಚಂದ ದ ಹೂವು ಗಳನ್ನು ಮಾಡಿ ಇಟ್ಟು ವಿಶ್ರಮಿಸಿದರಂತೆ.



ಅಂತೂ ಚುನಾವಣೆಗಳು ನಡೆದು ಆಡಳಿತ ಪಕ್ಷವು ವಿಜಯಲಕ್ಷ್ಮಿಯನ್ನು ಅಪ್ಪಿಕೊಳ್ಳಲು ಸಫಲರಾದರಂತೆ.ತೆಗಳುವ ಪಕ್ಷಕ್ಕೆ ಇದರಿಂದ ಭಾರಿ ಖೇದ ವಾಗಿ ನೇರವಾಗಿ ಭವಿಷ್ಯ ಪ್ರವಚಕ ರಾದ ಶಾರದೆ ಪುತ್ರ ನ ಬಳಿ ಸಾಗಿದರಂತೆ. ಇವರ ದುಃಖವನ್ನು ಆಲಿಸಿದ ಅವರು, ಇದಕ್ಕೆ ರಾಹುಕಾಟ ವೆಂದು ಹೇಳುತ್ತ “ತಪ್ಪು ನಿಮ್ಮದೇ, ಭೂದೇವಿಯನ್ನು ಕೊಡುತ್ತಾ, ಸರಸ್ವತಿ ಪುತ್ರರಾಗಿರುವರಿಂದ ನೀವು ಆಪರೇಶನ್ ಅನ್ನು ಮಾಡಿದ್ದಲ್ಲಿ, ಯಾವಾಗಲು ರಿನ್ ಶುಭ್ರತೆಯ ರಾಹುಲನು ನಿಮ್ಮ ಪಕ್ಷಕ್ಕೆ ತರಬಹುದಿತ್ತೆಂದು ಹೇಳಿ, ಶೃಂಗೇರಿ ಗೆ ಪುಷ್ಪಕ ವಿಮಾನ ಏರಿದರಂತೆ.”



ಇತ್ತ ಮಣ್ಣಿನ ಮಗ ವಿಷಯವನ್ನು ತಿಳಿದು ಸೂತ್ರಧಾರನ ಮೇಲೆ ಕೆಂಡಾ ಮಂಡಲ ವಾದನಂತೆ. ಭಕ್ತನನ್ನು ಮಿಸ್ ಮಾಡಿಕೊಂಡರೆ, ಅವನ ಪಾರ್ಟೀಯವರು ಯಾರೂ ಮುಂದೆ ಹುಂಡಿ ಗೆ ಹಣ ಹಾಕುವುದಿಲ್ಲವೆಂದು ಬೆದರಿದ ಭಗವಂತನು ಭೂದೇವಿಯ ಪುತ್ರ ನಿಗೆ ತನ್ನ ದರುಶನ ಕೊಟ್ಟು ಕಾರಣ ಪೇಳಲು ಶುರು ವಿಟ್ಟ ನಂತೆ . ನೀನು ನನ್ನನ್ನು ಪೂಜಿಸಿ ನನ್ನ ಮತ್ತೆ ಮಗನನ್ನು ಗೆಲ್ಲಿಸೆ೦ದು ಪೂಜಿಸಿದೆ, ಇಷ್ಟ ಪದಾರ್ಥಗಳನೆಲ್ಲ ನೈವೇದ್ಯ ಮಾಡಿದೆ, ಸಂತೃಪ್ತ ಗೊಂಡ ನಾನು ಖುಶಿ ಜಾಸ್ತಿ ಆಗಿ ಒಂದು ಹೆಚ್ಚಿಗೆ ಸೀಟ್ ಕೂಡ ಫ್ರೀ ಆಗಿ ಕೊಟ್ಟಿದ್ದೇನೆ ಎಂದು ಹೇಳಿದನಂತೆ. ನೀನು ಗೆಲ್ಲಲಿ ಎಂದು ಪ್ರಾರ್ಥಿಸಿದೆಯೇ ಹೊರತು ಆಡಳಿತ ಪಕ್ಷ ಸೋಲಲಿ ಎಂದು ಚಿಕನ್ 65 ನೈವೇದ್ಯ ಮಾಡಿರಲಿಲ್ಲ ವೆಂದು…. ಅದಕ್ಕೆ ಅವರು ಗೆದ್ಡಿದ್ದಾರೆ ಎಂದು ಹೇಳುತ್ತ ಅ೦ತರ್ಧಾನ ನಾದನ೦ತೆ .ಇಲ್ಲಿಗೆ ಕಥೆಯೂ ಸಮಾಪ್ತಿಯು.....

Sunday, May 17, 2009

ಸುಖ ಸಂಸಾರಕ್ಕೆ ಸಪ್ತ ಸೂತ್ರಗಳು.






ಇತ್ತೀಚೆಗೆ ದೇಶದಲ್ಲಿ ವಿವಾಹ ವಿಚ್ಚೇದನ ಗಳು ಜಾಸ್ತಿ ಆಗ್ತಾ ಇದೆ ಅಂತ ಸುದ್ದಿ. ಮದುವೆ ಆಗಿ 3-4 ವರ್ಷದ ನಂತರ ನಿನ್ ವ್ಯಾಲಿಡಿಟಿ ಮುಗೀತು ಅಂತ ಬೇರೊಬ್ಬ ಸಂಗಾತಿ ನ ಹುಡುಕೋದು ಸದ್ಯದ ಫ್ಯಾಶನ್. ಹೀಗೆ ಮಾಡುತ್ತಾ ಹೋದರೆ, ಮುಂದೊಮ್ಮೆ ಫಾದರ್ಸ್ ಡೇ, ಮದರ್ಸ್ ಮಾಡುವ ಹಾಗೆ ಗಂಡಂಡಿರ ದಿನ, ಹೆಂಡತಿರ ದಿನ ಅಂತ ಮಾಡಬೇಕಾಗಬಹುದು.

ಆದ್ದರಿಂದ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಿ ಸಂಸಾರವೆಂಬ ನೌಕೆಯನ್ನು ಸುಖಮಯವಾಗಿ ನಡೆಸುವುದಕ್ಕೆ ಕೆಲವು ಸೂತ್ರಗಳನ್ನು ಪರಿಣಿತರೊಂದಿಗೆ ಚರ್ಚಿಸಿ ಕೆಳಗೆ ಕೊಡಲಾಗಿದೆ.

1. ಮನೆಯ ಯಜಮಾನರು ಯಾರು ಅಂತ ಯಾವತ್ತೂ ಚರ್ಚೆ ಮಾಡೋಕೆ ಹೋಗಬೇಡಿ!! ನೀವಲ್ಲ ಅಂತ ಗೊತ್ತಿರುವಾಗ ವಿಷ್ಯ ಕೆದಕಿ ಜಗಳ ಯಾಕೆ?


2. ಒಬ್ಬ ಶಾಸಕ ಕೈ ಕೊಟ್ಟರೆ ಸೆಫ್ಟಿ ಗೆ ಇರಲಿ ಅಂತ ಆಪಶನ್ ಕಮಲ ಮಾಡಿದ ಹಾಗೆ, ಆಪಶನ್ ಹೆಂಡತಿ / ಗಂಡ ಮಾಡಬೇಡಿ!!! (ಎನ್ ಡಿ ಎ, ಯು ಪಿ ಯೆ, ತೃತೀಯ,,,,, ತರ ಅಕ್ರಮ ಕೂಡಿಕೆ ಬೇಡ )


3. ಮನುಷ್ಯ ಕುಡಿದಾಗ ಸತ್ಯ ಹೇಳ್ತಾನೆ ಅಂತೆ, ಆದ್ದರಿಂದ ಮತ್ತೇರಿದಾಗ ನಿಮ್ಮ ಸಂಗಾತಿ ಹತ್ತಿರ ಕಾಲೇಜ್ ಜೀವನದ ಬಗ್ಗೆ ಮತಾಡ ಬೇಡಿ. ಕೆಲವೊಂದು ಕೃಷ್ಣ ಲೀಲೆ ಗಳು ಹೊರಬಾರದೇ ಇರುವುದು ಉತ್ತಮ ಅಲ್ಲವೇ.


4. ನಿಮ್ ಮೈಲ್ ಇಡಿ ಗೆ ಪಾಸ್ ವರ್ಡ್ ಆಗಿರೋ ನಿಮ್ ಹಳೆ ಗರ್ಲ್ ಫ್ರೆಂಡ್ / ಬಾಯ್ ಫ್ರೆಂಡ್ ಹೆಸ್ರನ್ನ ತೆಗೆದು ಬಿಡಿ!! ಯಾವತ್ತಾದ್ರೂ ನಿಮ್ ಪಾಸ್‌ವರ್ಡ್ ಗೊತ್ತಾಗಿ, ಗಲಾಟೆ ಆಗಬಹುದು.


5. ಹೆಂಡತಿ ಹಾಡು ಹೇಳೋಕೆ ಶುರು ಮಾಡಿದ್ರೆ ಗಂಡ ಹೊರಗೆ ಹೋಗಿ ಕುಳಿತು ಕೊಳ್ಳೋದು ಒಳಿತು, ಇದರಿಂದ ನೀವು ಹೆಂಡತಿಗೆ ಹೊಡಿತ ಇದ್ದೀರ ಅಂತ ಜನ ತಪ್ಪು ತಿಳಿಯೋಲ್ಲ.


6. ಹೆಂಡತಿಗೆ ಸಿಟ್ಟು ಬಂದಾಗ ಅಡುಗೆ ಮನೆಗೆ ಬಿಡಬೇಡಿ…ಅಲ್ಲಿ ಅವರ ವೆಪನ್ಸ್ ಇರ್ತವೆ ಲೈಕ್ ಲಟ್ಟಣಿಗೆ , ಮಗಚೋ ಕೈ…


7. ಸಾಫ್ಟ್ ವೇರ್ ಇಂಜಿನಿಯರ್ ನ ಮದುವೆ ಆಗೋದು ಒಳ್ಳೆಯದು ಅನ್ಸುತ್ತೆ, ಅವರು ಹಗಲು ಯಾವಾಗ್ಲೂ ಓಫೀಸ್ ನಲ್ಲೇ ಇರ್ತಾರೆ, ವೀಕ್ ಎಂಡ್ ಮನೇಲಿ ಇದ್ರು ಲ್ಯಾಪ್ ಟಾಪ್ ಹಿಡಿದು ಕೆಲ್ಸಾ ಮಾಡ್ತಾ ಇರ್ತಾರೆ, ಇವರಿಗೆ ಜಗಳ ಮಾಡೋ ಅಷ್ಟು ಟೈಮ್ ಕೂಡ ಇರೋಲ್ಲ!!!!






ವಿಶೇಷ ಸೂಚನೆ: ಈ ಸೂತ್ರ ಗಳು ಕುಮ್ಮಿ ಮತ್ತು ರಾಧಿಕಾಗೆ ಸಂಬಂಧಿಸಿರುವುದಿಲ್ಲ ಹಾಗೆಯೇ ಗಣಿ ರೆಡ್ಡಿ ಗಳಿಗು ಕೂಡ.

Thursday, May 7, 2009

ಲಲ್ಲೂ, ಮಾಯಾ ಪ್ರಧಾನಿ ಆದ್ರೆ?

ಭಾಗಶಃ ಮುಂದಿನ ಕೆಲವು ದಿನಗಳು ಡೆಲ್ಲಿ ಯಲ್ಲಿ ಕುರ್ಚಿ ಗಾಗಿ ಬಹು ದೊಡ್ಡ ಸಂಗ್ರಾಮ, ಹಾಗೂ ಹೋರಾಟವೇ ನಡೆಯಲಿದೆ. ಗೌಡ ರಿಂದ ಕಾರಟ್ ವರೆಗೂ, ಜಯ ಇಂದ ಮಾಯಾ ವರೆಗೂ ಎಲ್ಲರಿಗೂ ಪ್ರಧಾನ ಮಂತ್ರಿ ಹುದ್ದೆ ಮೇಲೆ ಕಣ್ಣು. ದೇಶ ಸೇವೆ ಮಾಡಲು ಇಷ್ಟೊಂದು ಜನ ತುದಿ ಗಾಲಲ್ಲಿ ನಿಂತಿರುವುದು ಭಾರತೀಯರಾದ ನಮ್ಮ ಸೌಭಾಗ್ಯ!! (ಯಾವ ಆಂಗಲ್ ನಿಂದ ಸೌಭಾಗ್ಯ ಅಂತ ಕೇಳಬೇಡಿ)


ಸರಿ, ಎಲ್ಲ ಓಕೆ, ವಿಷ್ಯಕ್ಕೆ ಬಂದಿಲ್ಲ ಯಾಕೆ ಅಂತೀರಾ? ಇದೋ ಬಂದೆ. ಈ ಕೆಳ ಕಂಡ ಮಹನೀಯರು ಪ್ರಧಾನಿ ಆದರೆ ಏನಾಗ ಬಹುದು ಅನ್ನೋದು ಈಗಿನ ಚಿಂತನೆ, ಹಾಗೂ ಕಲ್ಪನೆ.


ಮೊದಲಿಗೆ ಮಣ್ಣಿನ ಮಗ ದೇವೆ ಗೌಡ್ರು:













1. ಆಫೀಸ್ ನಲ್ಲಿ ನಿದ್ದೆ ಮಾಡೋರಿಗೆ ನಿದ್ದೆ ಬತ್ಯೆ


2. ಶಾಲೆ ಗಳಲ್ಲಿ ಬಿಸಿ ಊಟಕ್ಕೆ ರಾಗಿ ಮುದ್ದೆ ಮತ್ತೆ ಕೋಳಿ ಸಾರು!!!

3. ಕುಮಾರ ಸ್ವಾಮಿ ಮುಖ್ಯ ಮಂತ್ರಿ ಯನ್ನಾಗಿ ಮಾಡೋಕೆ ಎಲ್ಲ ಪ್ರಯತ್ನ, ರೇವಣ್ಣ ಎಲ್ಲಾದ್ರೂ ರಾಜ್ಯ ಪಾಲ, ಹಾಗೂ ಕುಮಾರಣ್ಣನ ನ ಮಗ ಹರದಾನ ಹಳ್ಳಿ ಪಂಚಾಯಿತಿ ಅಧ್ಯಕ್ಷ ಆಗ್ತಾನೇ.


4. ರಾಧಿಕ ಬಂದು ಪುಕ್ಕಟೆ ಡ್ಯಾನ್ಸ್ ಮಾಡಲಿ ಅನ್ನೋದು ನಮ್ಮ ಶುದ್ದ ಪೋಲಿ ಬೇಡಿಕೆ ಬಿಡಿ.




ದೊಡ್ಡ ರಾಜ್ಯದ ಮುಖ್ಯ ಮಂತ್ರಿ, ಮಾಯವತಿ ಪ್ರಧಾನಿ ಆದರೆ ಹೇಗೆ?ಅದು ಹೇಗೂ ಇರಲಿ, ನಮ್ಮೆಲ್ಲ ಸರ್ಕಾರೇತರ ಸಂಸ್ಥೆಗಳಿಗೆ 3 ದಿನ ಎಕ್ಸ್‌ಟ್ರಾ ರಜೆ ಸಿಗುತ್ತೆ. (ಸರ್ಕಾರಿ ಸಂಸ್ಥೆಗಳಿಗೆ ಬೀದಿ, ಸುಲಬಕ್ಕೆ ಸಿಗುತ್ತೆ)













1. ಅಂಬೇಡ್ಕರ್ ಜಯಂತಿ


2. ಕನ್ಶಿರಮ್ ಜಯಂತಿ

3. ಮಾಯವತಿ ಹುಟ್ಟಿದ ಹಬ್ಬ



ಲಲ್ಲೂ ಪ್ರಸಾದ್ ಯಾದವ್ ಆದ್ರೆ?












1. ಗಂಡ ತಪ್ಪು ಮಾಡಿ ಜೈಲಿಗೆ ಹೋದ್ರೆ ಹೆಂಡತಿಗೆ ಆ ಕೆಲ್ಸಾ (ಲಾಲೂ ಕುಟುಂಬವೇ ಇದಕ್ಕೆ ಆದರ್ಶ)


2. ಹಿಂದೆ ಮೇವು ಹಗರಣ ಮಾಡಿದ ಹಾಗೆ, ಈಗ ಪಶು ಹಗರಣ!!!!

3. ಅಕಸ್ಮಾತ್ ನಾವೇನಾದ್ರೂ ತಪ್ಪು ಮಾಡಿದ್ರೆ ನಮ್ ಮೇಲೆ ರೋಡ್ ರೋಲರ್!!



ಸತ್ಯಂ ರಾಜು ಪ್ರಧಾನಿ ಆದರೆ?

1. INDIA ಹೋಗಿ AIDNI ಆಗುತ್ತೆ!!!


2. ಶ್ರೀನಿವಾಸ್ ಹೊಸ ಅರ್ಥ ಸಚಿವ!!!


3. ಭಾರತ ಅಭಿವೃದ್ದಿ ಹೊಂದಿದ ದೇಶ ಅಂತ ಕಾಗದದಲ್ಲಿ ಘೊಷಣೆ.




ಇನ್ನೂ ನಮ್ಮ ಸಾಫ್ಟ್‌ವೇರ್ ಇಂಜಿನಿಯರ್ ಆದ್ರೆ ಏನಾಗ ಬಹುದು?

1. ಪ್ರತಿಯೊಬ್ಬರಿಗೂ ಓರ್ಕುಟ್ ಅಕೌಂಟ್ ಕ್ರಿಯೇಟ್ ಮಾಡಲಾಗುತ್ತದೆ.


2. ಈ ವೋಟಿಂಗ್ ಸೌಲಬ್ಯ!!!

3. ತಪ್ಪು ಮಾಡಿದವರಿಗೆ ಜೈಲಿಗೆ ಕಳಿಸೋ ಬದಲು, ಅವರ ಕಂಪ್ಯೂಟರ್ ಗೆ ಒಂದಿಷ್ಟು ವೈರುಸ್ ಬಿಡೋದು!!!



ಮೇಲಿನದೆಲ್ಲವು ಸತ್ಯ ಆದರೆ, ಅದಕ್ಕೆ ನಾನು ಜವಾಬುದಾರ ಅಲ್ಲ. ಸತ್ಯ ಆದರೆ ಕಾಕತಾಳೀಯವೂ ಅಲ್ಲ.